ಪೋಸ್ಟ್‌ಗಳು

#lifestyle ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಕ್ಕಳಿರಲಿ ಅಡುಗೆ ಅರಮನೆಯಲ್ಲಿ..

ಇಮೇಜ್
ಇನ್ನೇನು ಮಕ್ಕಳ ಬೇಸಿಗೆ ರಜೆಪ್ರಾರಂಭವಾಗಲಿದೆ. ಮಕ್ಕಳ ಪಾಲಿಸಬೇಕಾದ ನಿತ್ಯದ ದಿನಚರಿಯಿಂದ ವಿರಾಮವನ್ನು ನೀಡುತ್ತದೆ. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ವಿಶ್ರಮಿಸಲು, ಹೊಸ ವಿಷಯಗಳ ಅನ್ವೇಷಿಸಲು ಮತ್ತು ಶಾಶ್ವತವಾದ ನೆನಪುಗಳನ್ನು ರಚಿಸಲು ಉತ್ತಮ ಸಮಯ. ಇಂತಹ  ದಿನಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬಹುದಾದ ಚಟುವಟಿಕೆಗಳಲ್ಲಿ ಅಡುಗೆಯೂ ಒಂದು. ಮಕ್ಕಳನ್ನು ಅಡುಗೆ ಮನೆಯಿಂದ ಹೊರಗಿಡುವ ದಿನಗಳು ಹೋಗಿವೆ. ಇಂದಿನ ಪಾಲನೆ ಶೈಲಿಯು ಮಕ್ಕಳು ಅಡುಗೆ ಮತ್ತು ಶುಚಿಗೊಳಿಸುವಿಕೆಯ ಕೌಶಲ್ಯಗಳನ್ನು ಕಲಿತಿರಬೇಕು ಎನ್ನುತ್ತದೆ. ಅಡುಗೆ ಲಿಂಗ ನಿರ್ಧಿಷ್ಟವೇನಲ್ಲ. ಅದು ಕೇವಲ ಹೊಟ್ಟೆ ತುಂಬಿಸುವ ಕಾರ್ಯವಲ್ಲದೆ, ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯ ಮಾಡುವಂತಹ  ಹವ್ಯಾಸ. ಇದನ್ನು ಚಿಕ್ಕಂದಿನಿಂದಲೇ ಅನುಸರಿಸುವುದರಿಂದ ಮಕ್ಕಳು ಬಹಳಷ್ಟು ವಿಷಯಗಳನ್ನು ಕಲಿಯಬಹುದು.  ಮಕ್ಕಳು ಅಡುಗೆ ಕಲಿಯುವುದರ ಉಪಯೋಗ :  ಪ್ರಾಯೋಗಿಕ ಜ್ಞಾನ : ಅಡುಗೆ ಪದಾರ್ಥವನ್ನು ಮಾಡಲು ಬೇಕಾಗುವ ಸಲಕರಣೆಗಳ ಕುರಿತಾದ ಜ್ಞಾನ ವೃದ್ಧಿಯಾಗುತ್ತದೆ.  ಸಂಯೋಜನಾ ಕೌಶಲ್ಯ ಮತ್ತು ಗ್ರಹಿಕೆ :  ಆಹಾರ ವಸ್ತುಗಳ ಎತ್ತುವ, ಮಡಚುವ, ಮಗಚುವಾಗ ಕಣ್ಣು ಕೈಗಳ ಸಂಯೋಜನೆ, ಹಿಟ್ಟನ್ನು ಕಲೆಸುವಾಗ, ಕಾಯಿ ತುರಿಯಬೇಕಾದಾಗ, ತರಕಾರಿ ಹೆಚ್ಚುವಾಗ, ಕ್ಯಾರೆಟ್ ತುರಿಯುವಾಗ, ಬೆಂಕಿ ಹಚ್ಚುವಾಗ, , ಯಾವ ವಸ್ತು ಯಾವ ಪ್ರಮಾಣದಲ್ಲಿ ಹಾಕಬೇಕು, ಎಷ್ಟು ವಸ್ತುಗಳು ಬೇಕು...

ತಿನ್ನಕ್ಕೇನಿದ್ದು?

ಇಮೇಜ್
ಮಕ್ಕಳ ಪರೀಕ್ಷಾ ಸಮಯ. ಸ್ಕೂಲಿಗೆ ರಜಾ, ಮಕ್ಕಳಿಗೆ ಮಜಾ.. ಓದಲಿಕ್ಕೆ ಕೂರಲು ಅವರಿಂದಾಗದು. ಓದದೇ ಕುಣಿಯಲು ಬಿಡಲು ನಮ್ಮಿಂದಾಗದು. ಈಗೆಂತು ಮಕ್ಕಳಿಗೆ ಪರೀಕ್ಷೆಗೆ ಓದಲು ಕುಳಿತರೆ ಬೋರ್ ಆಗಿಯೇ ಹಸಿವು ಜಾಸ್ತಿ. ಗಂಟೆಗಂಟೆಗೆ ಏನಾದರೂ ತಿನ್ನಲು ಕೊಡಬೇಕು.. ಹೊರಗಡೆಯ ಆಹಾರ ನೀಡಿ, ಪರೀಕ್ಷಾ ಸಮಯದಲ್ಲಿ ತೊಂದರೆ ತೆಗೆದುಕೊಳ್ಳಲು ನಮಗೆ ಇಷ್ಟವಿರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಾಯಿ ಬಡುಗೆಗೆ ಅಂಗಡಿಯಿಂದ ತಂದ ಪೊಟ್ಟಣ ಆಹಾರವೆಂತೂ ಅವಶ್ಯಕತೆಕಿಂತ ಹೆಚ್ಚಿನ ಸಕ್ಕರೆ ಮತ್ತು ಕೆಟ್ಟ ಜಿಡ್ಡಿನ ಅಂಶದ್ದಾಗಿದ್ದು, ಮಕ್ಕಳಿಗೆ ಓದಲು ಮನಸ್ಸಾಗದಂತೆ ಇನ್ನಷ್ಟು ಆಲಸ್ಯತನವನ್ನು ಒಡ್ಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅದು ಇದು 'ತಿನ್ನಕ್ಕೇನಿದ್ದು' ಗೆ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ. ಹೀಗೊಂದು ಇವತ್ತಿನ ರೆಸಿಪಿ ಬರೆದಿಟ್ಟು ಹಂಚುವ ಎನಿಸಿತು. ಇದು ಮಕ್ಕಳನ್ನು ಓದಲು ಕೂರಿಸಿಕೊಂಡು ಪ್ರಶ್ನೋತ್ತರ ಕೇಳುವ ಸಮಯದಲ್ಲೇ ಮಾಡಬಹುದಾದ ಒಂದು ಸುಲಭವಾದ ಪೌಷ್ಟಿಕವಾದ ಹಲ್ವಾ.  ವಿ.ಸೂ : ಇದು ನನ್ನ ಸಸ್ಯಜನ್ಯ ಆಹಾರದ ರೆಸಿಪಿ ಒಂದು ದೊಡ್ಡ ಕಪ್ ಗೋಡಂಬಿ ಒಂದು ಗಂಟೆಗಳ ಕಾಲ ನೆನೆಸಿಕೊಂಡು, ಕನಿಷ್ಠ ನೀರಿನಲ್ಲಿ ಮಿಕ್ಸರ್ ಗ್ರೇನ್ದರ್ ಗೆ ಹಾಕಿ ಬೀಸಿಟ್ಟುಕೊಳ್ಳಬೇಕು.  ಸಣ್ಣಗೆ ತುರಿದ ಕ್ಯಾರೆಟ್  ಅರ್ಧ ಕಪ್  ತುರಿದ ಕಾಯಿ ಕಾಲು ಕಪ್ (ಹಲ್ವಾ ತರಿತರಿಯಾದ  ಟೆಕ್ಸ್ಚರ್ಬೇಕಿದ್ದಲ್ಲಿ) ನಾಲ್ಕು ಚಮಚ ಸಕ್ಕರೆ.  ಬಿಸಿನ...

walk2HEAL - ನಡಿಗೆ

ಇಮೇಜ್
 ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ನನ್ನ ಪ್ರತಿನಿತ್ಯದ ಚಟುವಟಿಕೆ. ಕಬ್ಬನ್ ಪಾರ್ಕಿನಲ್ಲಿ ನಾಲ್ಕು ಕಿಲೋಮೀಟರ್ ನಡಿಗೆಯ ವಾಕಥಾನ್ ಕಾರ್ಯಕ್ರಮದ ಬಗ್ಗೆ ತಿಳಿದು, ಭಾನುವಾರ ಬೆಳಿಗ್ಗೆಗೆ ಮಗಳ ಜೊತೆ ವಾಕ್ ಮಾಡುವ ಪ್ರೋಗ್ರಾಂ ಫಿಕ್ಸ್ ಆಯಿತು.  ಅದು ಗೋಪಾಲ್ಸ್ ಸ್ವಯಂ ಸೇವಾ ಸಂಸ್ಥೆಯಿಂದ "walk2HEAL" ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ಆರೋಗ್ಯಕ್ಕಾಗಿ ನಡಿಗೆ. HEAL stands for - H - Health, E - Environment A - Agriculture L - Lifestyle ನಮ್ಮ ಆರೋಗ್ಯ, ಪ್ರಕೃತಿಯೊಂದಿಗಿನ ಬೆಸುಗೆ, ಮಾಲಿನ್ಯ ರಹಿತ ಕೃಷಿ - ಆ ಮೂಲಕ ನಮಗೆ ದೊರಕುವ ಆಹಾರ ಹಾಗೂ ಇವೆಲ್ಲದರ ಜೊತೆ ಅಡಕವಾಗಿರುವ ನಮ್ಮ ಜೀವನಶೈಲಿ ಇವೆಲ್ಲವೂ ಒಂದಕ್ಕೊಂದು ಪೂರಕವಾದ ಅಂಶಗಳು. ಇವೆಲ್ಲದರ ಕುರಿತಾದ ಜಾಗೃತಿಗಾಗಿ ನಡೆಸಿದ ಜಾಥಾ ಈ ನಡಿಗೆ ಕಾರ್ಯಕ್ರಮ.  ದೇಸಿ ಹಸುಗಳ ಸಂರಕ್ಷಣೆ ಮತ್ತು ಪಾಲನೆಯ ಸದುದ್ದೇಶದಿಂದ ಹುಟ್ಟಿಕೊಂಡಿರುವ, ಒಂದು ಸ್ವಯಂ ಸೇವಾ ಸಂಸ್ಥೆ ಗೋಪಾಲ್ಸ್. ಇಲ್ಲಿ ಗೋ ಎಂದರೆ ಗೋವು ಎಂದರ್ಥ ಮತ್ತು ಪಾಲ್ಸ್ ಎಂದರೆ ಇಂಗ್ಲೀಷಿನಲ್ಲಿ, ಸ್ನೇಹಿತರು ಎಂಬುದಕ್ಕೆ ಸೂಚಿಸುವ ಪದ. ಹಸುವಿನ ಸ್ನೇಹಿತರು ನಾವು ಎಂಬರ್ಥ ಈ ಸೇವಾ ಸಂಸ್ಥೆಯ ಹೆಸರೇ ತುಂಬಾ ಕ್ರಿಯಾತ್ಮಕವೆನಿಸಿತು. ಈ ಸಂಸ್ಥೆಗಾಗಿ ಕೆಲಸ ಮಾಡುವವರ್ಯಾರೂ ತಮ್ಮ ಹೊಟ್ಟೆಪಾಡಿನ ದುಡಿಮೆಗೋಸ್ಕರ ಈ ಸಂಸ್ಥೆಯನ್ನು ನೆಚ್ಚಿಕೊಂಡವರಲ್ಲ, ಅವರ ಜೀವನಧಾರದ ದುಡಿಮೆಯ ಹೊರತಾಗ...

ಮಕ್ಕಳ ಮನಿ ಮ್ಯಾನೇಜ್ಮೆಂಟ್

ಇಮೇಜ್
ಮಗಳ ಶಾಲೆಯಲ್ಲಿ, ಆರನೇ ತರಗತಿಯ ಮೇಲ್ಪಟ್ಟ ಮಕ್ಕಳು ತಮಗೆ ಆಸಕ್ತಿಯಿರುವ ಸಾಮಗ್ರಿ ಅಥವಾ ಸೇವೆಗಳ ಅಂಗಡಿಗಳನ್ನು ಹಾಕಿದ್ದ ಎಕ್ಷಿಬಿಷನ್ ಕಮ್ ಸೇಲ್ ಕಾರ್ಯಕ್ರಮವಿತ್ತು. ವಿವಿಧ ಬಗೆಯ ತಿಂಡಿಗಳು, ಆಟಗಳು, ಕ್ರಾಫ್ಟ್, ಮೆಹಂದಿ, ಟ್ಯಾಟೂ, ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಎಲ್ಲವೂ ಮಕ್ಕಳಿಂದಲೇ. ಮಾರಾಟದ ವಸ್ತುಗಳ ನಿಗದಿತ ಬೆಲೆ, ಚೌಕಾಸಿ ಬೆಲೆ, ಅಚ್ಚುಕಟ್ಟಾದ ಬೋರ್ಡ್ಗಳು,  ದುಡ್ಡು ಚಿಲ್ಲರೆಗಳ ವಹಿವಾಟು, ಖರ್ಚಾದ ವಸ್ತುಗಳ ಪಟ್ಟಿ ಮತ್ತು ತಮಗೆ ಸಂದುತ್ತಿರುವ ದುಡ್ಡಿನ ಲೆಕ್ಕಾಚಾರ ಎಲ್ಲದರ ದಾಖಲೆ ಬರೆದುಕೊಂಡು ತಮಗೆಷ್ಟು ಲಾಭ ಸಂದಿದೆ ಇತ್ಯಾದಿ ತಮ್ಮ ತಮ್ಮಲ್ಲೆ ಮಾತುಕತೆ ಮಾಡಿಕೊಳ್ಳುತ್ತಿದ್ದ ಮಕ್ಕಳ ನೋಡಿ ಸಂತೋಷವಾಯಿತು. ಅಲ್ಲಿ ಮಕ್ಕಳ ಆರ್ಥಿಕ ಸಾಕ್ಷರತೆ ಪ್ರಾಯೋಗಿಕವಾಗಿ ಕಂಡುಬರುತ್ತಿತ್ತು.  ಆರ್ಥಿಕ ಸಾಕ್ಷರತೆ ಎಂದರೇನು? ನಾವು ಹೆಚ್ಚಿನ ಭಾರತೀಯ ಪೋಷಕರು ನಮ್ಮ ಮಕ್ಕಳು ಹಣವನ್ನು ನಿಭಾಯಿಸಲು ಅಥವಾ ಅದರ ಕುರಿತು ಮಾತನಾಡಲು ಇನ್ನೂ ತುಂಬಾ ಚಿಕ್ಕವರು ಎಂದು ಭಾವಿಸುತ್ತೇವೆ. ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎಂಬ ಅಸಡ್ಡೆಯ ಮಾತು, ಮಕ್ಕಳಲ್ಲಿ ಅವರಲ್ಲಿನ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಮುಂದೆ ಹದಿಹರೆಯದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನ ಇಲ್ಲದೆ ಮಕ್ಕಳು ಕೆಲವೊಮ್ಮೆ ವಂಚನೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ.  ಅಂತೆಯೇ ಕೆಲವರ ಮನೆಯಲ್ಲಿ ಸ್ವೇಚ್ಛೆಯ ಬದುಕು ಅಭ್ಯಾ...

ನಮ್ಮ ಆಹಾರವೇ ನಮಗೆ ಔಷಧಿ

ಇಮೇಜ್
ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ.  ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ.  ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ...

ಇವತ್ ಯಾವ ಹಣ್ಣು ತಿಂದ್ರಿ??

ಇಮೇಜ್
ಹಣ್ಣು ಅಂದ್ರೆ ಯಾರಿಗೆ ಪ್ರಿಯವಲ್ಲ.. ಇಂದು ಈ ವರ್ಷದ ಮೊದಲ ಸ್ಟ್ರಾಬೆರಿ ಹಣ್ಣೊಂದನ್ನು ಬಾಯಿಗೆ ಹಾಕಿಕೊಂಡಾಗ ತಿಂದ ಮೊದಲ ಹಣ್ಣಿನ ಅತ್ಯಂತ ಹುಳಿಯಾದ ರುಚಿಯಿಂದಾಗಿ ಮುಖ ಕಿವುಚಿ ಹೋಯಿತು. 'ಅಬ್ಬಬ್ಬಾ..' ಎಂದು ಅಂತೂ ಸಾವರಿಸಿಕೊಂಡು ತಿನ್ನುವುದನ್ನು ಮುಂದುವರೆಸಿದೆ. ಮತ್ತೆ ೩ ಹಣ್ಣು ಮುಗಿಯುವರ್ಷ್ಟರಲ್ಲಿ, ಈ ಸೂಪರ್ ಸ್ಪೀಡ್ ಬ್ರೈನ್ ಎಷ್ಟೊಂದು ವಿಷಯಗಳನ್ನು ಯೋಚಿಸಿ ಗುಡ್ಡೆ ಹಾಕಿ, ನೆನಪುಗಳನ್ನು ಮೆಲಕು ಹಾಕಿ, ಒಂದಷ್ಟು ಭಾವನೆಗಳನ್ನು ಮಗಚಿ ಎತ್ತಿ ತಂದುಕೊಟ್ಟಿತ್ತು..!! ಹಣ್ಣುಗಳನ್ನು ತಿನ್ನುವುದಕ್ಕೆ ನನಗೇನೂ ಹೆಚ್ಚಿನ ಬೇಸರವಿರಲಿಲ್ಲ..ಹಾಗೆಂದು ಗಾಬರಿಸಿ ಹೋಗಿ ತಿನ್ನುವಷ್ಟು ವ್ಯಾಮೋಹವೂ ಕೂಡ ಕಡಿಮೆ. ಚಿಕ್ಕಂದಿನಿಂದಲೂ ಮಕ್ಕಳು ಹಣ್ಣು ತಿನ್ನಲೆಂದು ಅಪ್ಪಾಜಿ ಪಡುತ್ತಿದ್ದ ಸಾಹಸ ಅಷ್ಟಿಷ್ಟಲ್ಲ. ಹಣ್ಣು ತಿನ್ನೀ ಎಂದು ಕೇಳಬೇಕಿತ್ತು, ಸಿಪ್ಪೆ ಬಿಡಿಸಿ ನಾವಿಬ್ಬರು ಹೆಣ್ಮಕ್ಕಳ ಮುಂದೆ ತರಬೇಕಿತ್ತು..ಅಕ್ಕಂಗೆ ತಿನ್ನಿಸಲೆಂತೂ..ಆಕರ್ಷಕವಾಗಿ ಕತ್ತರಿಸಿ ಬೌಲ್ ಅಲ್ಲಿ ಹಾಕಿ ತಂದು ಕೊಡುವ ಜವಾಬ್ಧಾರಿ !! ನಾವು ತಿನ್ನಲು ಸೋಮಾರಿತನ ತೋರಿಸಿದಾಗ, ಅಪ್ಪಾಜಿ ಚಿಕ್ಕಪ್ಪಂದಿರೆಲ್ಲ ಹೇಗೆ ಊರಲ್ಲಿ ಚಿಕ್ಕಂದಿನಲ್ಲಿ ಯಾವುದೇ ಬಾಳೆಹಣ್ಣಿನ ಚಿಪ್ಪನ್ನು ಒಂದು ಕ್ಷಣದಲ್ಲಿ ಇಲ್ಲವಾಗಿಸುತ್ತಿದ್ದರು, ಕಡೆಗೆ ಅದು ಹುಳಿ ಹುಳಿ ಸೇಲಂ ಜಾತಿಯ ಬಾಳೆಹಣ್ಣಾದರೂ ಸರಿ, ಸಿಪ್ಪೆ ಕೂಡ ಬಿಡಿಸಿ ತಿನ್ನವಷ್ಟು ವ್ಯವಧಾನವಿಲ್ಲದೆ, ಸಿಪ್ಪ...