ಪೋಸ್ಟ್‌ಗಳು

ಟಿಬೆಟಿಯನ್ ಘುಮ್ ಮೊನಸ್ಟರಿ

ಇಮೇಜ್
ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ.    ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ.  ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ  ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡ...

ಬೆಟ್ಟಗಳ ರಾಣಿ - ದಾರ್ಜೀಲಿಂಗ್

ಇಮೇಜ್
ಹಿಮಾಲಯದ ಪರ್ವತ ಶ್ರೇಣಿಗಳೆಂದರೆ ನನಗೇಕೋ ಮುಗಿಯದ ಆಸೆ. ಈ ಸಲದ ಪ್ರವಾಸಕ್ಕೆ ನಮ್ಮ ಗಮನ ಸೆಳೆದದ್ದು ಪಶ್ಚಿಮ ಬಂಗಾಳ.  ದಾರ್ಜೀಲಿಂಗ್ ಒಂದು ಅತ್ಯಂತ ಸುಂದರವಾದ ಗಿರಿಧಾಮ, ಹಿಮಾಲಯದ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಇರುವ ಈ ಪಟ್ಟಣ, ಯುನೆಸ್ಕೋ ದ ವಿಶ್ವ ಪರಂಪರೆಯ ತಾಣದಲ್ಲಿ ಒಂದು. ಪ್ರವಾಸಿಗರಾಗಿ ಈ ಪ್ರದೇಶದ ಸೌಂದರ್ಯವನ್ನು ಸವಿಯಬೇಕೆಂದರೆ, ಡಿಸೇಂಬರ್ ನಂತರದ ಹಿಮಸುರಿತವನ್ನು ಅನುಭವಿಸಬೇಕು ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೆವು. ಆದರೂ ವರ್ಷವಿಡೀ ಮಂಜು ಕವಿದಿರುವ ಊರು, ಹಿಮಾಲಯದ ಮಹೋನ್ನತ ಶ್ರೇಣಿಯ ಪ್ರದೇಶ ಎಂಬ ಅರಿವಿದ್ದರಿಂದ, ಈ ಸಮಯಕ್ಕೆ ಕಾಣಸಿಗುವ ವೈವಿದ್ಯತೆಯನ್ನು ನೋಡಲು ನಾವು ತಯಾರಾಗಿಯೇ ಹೋಗಿದ್ದೆವು.  ದಾರ್ಜೀಲಿಂಗ್ ಅನ್ನು ಹೆಚ್ಚು ಕಮ್ಮಿ ಬ್ರಿಟಿಷರು ಕಟ್ಟಿದ ನಾಡು ಎಂದೇ ಹೇಳಬಹುದು. ದಾರ್ಜೀಲಿಂಗ್ ನ ಉತ್ತಮ ಹವಾಗುಣದಿಂದ ಆಕರ್ಷಿತವಾಗಿ, ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ನಿಯೋಗ, ಈ ಊರನ್ನು ಸಿಕ್ಕಿಂ ರಾಜರಿಂದ ಗುತ್ತಿಗೆಪಡೆದಿದ್ದು. ತೀಕ್ಷ ಉಷ್ಟತೆಯಿಂದ ರಕ್ಷಿಸಿಕೊಳ್ಳಲು ಬ್ರಿಟಿಷರಿಗೆ ಇದೊಂದು ಅತ್ಯಂತ ಪ್ರಿಯವಾದ ಸ್ಟಳವಾಗಿತ್ತು. ಗಿರಿಧಾಮದ ನಿರ್ಮಾಣ, ಪ್ರಾಯೋಗಿಕ ಚಹಾ ತೋಟದ ಹುಟ್ಟು, ಅಲ್ಲಿ ಬಂದು ತಂಗುವ ಬ್ರಿಟಿಷ್ ಜನರಿಗಾಗಿ ಶಿಕ್ಷಣ ಮತ್ತು ಅನೇಕ ಬಗೆಯ ಕ್ಷೇಮಾಭಿವೃದ್ಧಿ ಕೇಂದ್ರಗಳ ನಿರ್ಮಾಣ ಹೀಗೆ ಹಂತಹಂತವಾಗಿ ಮೂಡಿತು ದಾರ್ಜೀಲಿಂಗ್ ಪಟ್ಟಣ. ಅಂದಿನ ದಾರ್...

ಯೋಗ ಯಾತ್ರೆ - ಕನ್ಯಾಕುಮಾರಿ

ಇಮೇಜ್
ಭಾರತದ ದಕ್ಷಿಣದ ತುತ್ತತುದಿಯಲ್ಲಿ, ಹಿಂದೂ ಮಹಾ ಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರ ಎಂಬ ಮೂರು ಮಹಾಸಾಗರಗಳು ಸಂಗಮವಾಗುವ ಸ್ಥಳದ ತಟದಲ್ಲಿದೆ ಕನ್ಯಾಕುಮಾರಿ. ಐತಿಹಾಸಿಕ ಪ್ರಸಿದ್ಧತೆ ಪಡೆದಿರುವ ಈ ಒಂದು ಪುಣ್ಯಕ್ಷೇತ್ರವನ್ನು ನೋಡುವ ಆಸೆ ಮೊದಲಿನಿಂದಲೂ ಇದ್ದರೂ, ಅದು ಹೇಗೋ ನನಗೆ  ಕನ್ಯಾಕುಮಾರಿ ನೋಡುವ ಕಾಲ ಕೂಡಿ ಬಂದಿರಲಿಲ್ಲ. ಯೋಗ ಟ್ರೈನರ್ ಕೋರ್ಸನ್ನು ಪಡೆಯುತ್ತಿರುವ ನನಗೆ, ನನ್ನ ಗುರುಗಳಾದ ಅಶೋಕ್ ಸರ್ ಇಂತಹದ್ದೊಂದು ಯೋಗ ಕಾನ್ಫರೆನ್ಸ್ ಬಗ್ಗೆತಿಳಿಸಿರದಿದ್ದರೆ, ಅದೆಂತಹ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೆ ಎಂಬುದು ಈ ಪ್ರವಾಸ ಮುಗಿಸಿ ಬಂದವಳಿಗೆ ಅರಿವಾಗುತ್ತಿದೆ.  'ಯೋಗ ಶಾಸ್ತ್ರ ಸಂಗಮ' ಎಂಬ ರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಭಾಗವಹಿಸುವ ಉದ್ದೇಶದ ಮೂಲಕ, ಕಲಿಯುತ್ತಿರುವ ಯೋಗ ವಿಚಾರವಾಗಿ ಅದೆಷ್ಟೋ ಗೊತ್ತಿರದ ಮಾಹಿತಿಗಳನ್ನು ತಿಳಿಯಲು, ಈ ಪುಣ್ಯಕ್ಷೇತ್ರದ ಪ್ರಸಿದ್ಧ ಸ್ಥಳಗಳನ್ನು ನೋಡಲು, ಇಷ್ಟದ ಟ್ರೆಕಿಂಗ್ ಮಾಡಲು, ಸತ್ಸಂಗದ ಮೂಲಕ ಮೂರು ದಿನಗಳಲ್ಲಿ ನಲವತ್ತಕ್ಕೂ ಹೆಚ್ಚು ಸ್ನೇಹಿತ ಸ್ನೇಹಿತೆಯರನ್ನು ಪಡೆಯುವ ಅವಕಾಶವಾದ್ದು ನನ್ನ ಪಾಲಿನ ಅದೃಷ್ಟವೇ ಸರಿ! ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಇವರು ಪ್ರತಿವರ್ಷದಂತೆ, ವಿಶಿಷ್ಟವಾಗಿ ರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುತ್ತಾರೆ. ಈ ಮೂರು ದಿನಗಳಲ್ಲಿ ಯೋಗ ಶಾಸ್ತ್ರದ ಕುರಿತಾದ ಅ...