ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಜಗಲ್ ಬೆಟ್ಟ

ಇಮೇಜ್
 ಇಂದು World Tourism Day/ವಿಶ್ವ ಪ್ರಾವಾಸೋದ್ಯಮ ದಿನ. ಪ್ರವಾಸ ಎನ್ನುವುದು ಕೆಲವರಿಗೆ ವ್ಯಾಪಾರದಂತಹ ಸ್ವಕಾರ್ಯದ ಉದ್ದೇಶಕ್ಕಾಗಿಇದ್ದರೆ , ಕೆಲವರಿಗೆ ಮನರಂಜನೆ, ವಿರಾಮ, ಸತ್ಕಾರ್ಯಕ್ಕಾಗಿ ಮಾಡುವ ಪ್ರಯಾಣವಾಗಿರಬಹುದು. ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯಾವಶ್ಯಕ. ಮಕ್ಕಳಿಗೆ ಪ್ರತಿ ಹೊಸತುಗಳು ಕೂಡ ಕಲಿಕೆ. ಗೆಳೆಯರೊಂದಿಗೆ ಮಕ್ಕಳೊಂದಿಗೆ ನಿನ್ನೆ ಟ್ರೆಕಿಂಗ್ ಹೋದ 'ನಿಜಗಲ್ ಬೆಟ್ಟ' ದ ಕುರಿತಾಗಿ ಒಂದು ಝಲಕ್.  ನಿಜಗಲ್ ಬೆಟ್ಟ ಬೆಂಗಳೂರಿನಿಂದ ೬೦ ಕಿಮೀ ದೂರದಲ್ಲಿ, ತುಮಕೂರಿಗೆ ಹೋಗುವ ಮಾರ್ಗದಲ್ಲಿ ದೊಬ್ಬಸ್ಪೇಟ್ ಎಂಬ ಊರಿನ ತಪ್ಪಲಿನಲ್ಲಿದೆ. ಅರ್ಧ ದಿನದ ಚಾರಣಕ್ಕೆ ಹೋಗಬಹುದಾದ ಸ್ಥಳಗಳಲ್ಲಿ ಇದೂ ಒಂದು. ೧೭ನೇ ಶತಮಾನದಲ್ಲಿ, ಚಿಕ್ಕದೇವರಾಯ ಒಡೆಯರ್ ಅವರ ಆಳ್ವಿಕೆಯ ಕಾಲದ ಈ ಬೆಟ್ಟದಲ್ಲಿ ಪಾಳುಬಿದ್ದ ದೇವರ ಮಂಟಪಗಳು, ಗುಹೆಗಳು ಮತ್ತು ಕೋಟೆಕಲ್ಲುಗಳನ್ನು ನೋಡಬಹುದಾಗಿದೆ. ದೇವಾಲಯಗಳ ಕಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಸುಂದರವಾದ ಕೆತ್ತನೆಗಳಿವೆ. ಹೈದರಾಲಿ ಮತ್ತು ನಡುವೆ ಕಾದಾಟವೂ ಇಲ್ಲಿ ನಡೆದಿತ್ತು ಎಂಬ ಐತಿಹಾಸಿಕ ಕಥೆಯಿದೆ. ನಾವು ಸ್ನೇಹಿತರಬಳಗದವರು ನಮ್ಮ ೬-೮ ವರ್ಷದ ಮಕ್ಕಳನ್ನು ಕರೆದುಕೊಂಡು, ಮಾತುಕಥೆಯಾಡುತ್ತ ನಡೆದದ್ದರಿಂದ, ಉತ್ಸಾಹದಲ್ಲಿ ೭-೮ ಕಿ.ಮೀ ನಷ್ಟು ಟ್ರೆಕಿಂಗ್ ಮಾಡಿದ್ದೇ ತಿಳಿಯಲಿಲ್ಲ. ಮಕ್ಕಳಿಗೆ ನೈಸರ್ಗಿಕ ಕಲ್ಲು ...

mother

ಕೋವಿಡ್ ೧೯ ಸೋಂಕು ರೋಗ ಪ್ರಾರಂಭವಾದಾಗಿನಿಂದ ಅನಿತಾ ಮತ್ತವಳ ಗಂಡನಿಗೆ, ಮನೆಯಿಂದಲೇ ಆಫೀಸು ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ. ಹಿಂದೆ ಮನೆಗೆಲಸಕ್ಕೆ ಹೆಲ್ಪರ್ ಇಟ್ಟುಕೊಂಡು, ದೊಡ್ಡ ಮಗನನ್ನು ಸ್ಕೂಲ್ ಮುಗಿದ ನಂತರ ಫುಟಬಾಲ್ ಆಟಕ್ಕೆ ಕಳಿಸಿಕೊಂಡು, ಪುಟ್ಟ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟುಕೊಂಡು, ಇಬ್ಬರೂ ತಮ್ಮ ತಮ್ಮ ಆಫೀಸು ಕೆಲಸ ಮುಗಿಸಿಕೊಂಡು ಸಂಜೆ ಎಲ್ಲರೂ ಗೂಡು ಸೇರಿಕೊಂಡರೆ, ಸಿಕ್ಕಷ್ಟು ಸಮಯ ಒಟ್ಟಿಗೆ ಕಳೆದು, ಮಕ್ಕಳ ಓದು ಬರಹ ಆಟಗಳನ್ನು ಮುಗಿಸಿಕೊಳ್ಳುವ ದಿನಚರಿಯಿದ್ದವರಿಗೆ, ಈಗ ಒಂದೇ ಸೂರಿನಡಿಯಲ್ಲಿ ನಾಲ್ಕು ಅನ್ಯಮನಸ್ಕರರ ಜೀವನ ಎಲ್ಲಿಲ್ಲದ ಅಸಮತೋಲನ ತಂದೊಡ್ಡುತ್ತಿದೆ. ಗಂಡನ ಮೀಟಿಂಗ್ ಸಮಯದಲ್ಲಿ ಮಕ್ಕಳು ಗಲಾಟೆ ಮಾಡಿದರೆ, ಅವರನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ ಎಂಬ ಬೈಗುಳ ತಿನ್ನುವುದು ಅನಿತಾ. ಆಫೀಸು ತಲೆಬಿಸಿಯ ಜೊತೆಗೆ, ಮನೆಗೆಲಸವನ್ನು ಮಾಡಿಕೊಂಡು, ಟೈಮ್ ಪಾಸ್ ಆಗದೆ ಒಂದೇ ಸಮನೆ ತಿನ್ನುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ತಿಂಡಿ ಒದಗಿಸಿಕೊಳ್ಳುತ್ತ, ಕೊರೋನಾ ಸಮಯದಲ್ಲಿ ಸೋಂಕುಗಳಿಂದ ದೊರವಿರಲು ವಹಿಸಬೇಕಾದ ಎಲ್ಲ ಜಾಗ್ರತೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ, ಅನಿತಾ ಬಸವಳಿದು ಹೋಗುತ್ತಿದ್ದಾಳೆ.ಶಾಲೆಯಿಲ್ಲದೆ ಓದು ಬರಹದ ಅಭ್ಯಾಸವೇ ಬಿಟ್ಟು ಅಶಿಸ್ತು ಮೈಗೂಡಿಸಿಕೊಂಡಿರುವ ಮಕ್ಕಳ ಬೆಳಗು ಪ್ರಾರಂಭವಾಗುವುದೇ ಟೀವಿಯಿಂದ! ವಿಡಿಯೋ ಗೇಮ್ಸ್ ಆಟಕ್ಕೆ ಮಗ ಅಂಟಿಕೊಂಡಿದ್ದರೆ ,ರೈಮ್ಸ್ ಹಾಡುಗಳಿ...

ವಿಶ್ವ ಭೂಮಿ ದಿನ

ಇಮೇಜ್
"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!!  ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ,  ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡ...

kodi beach

ಕಡಲ ತೀರದ ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ ಮತ್ತು ಸಮುದ್ರದ ಅಲೆಗಳ ಬಿಳುಪು ಕುರಿತಾಗಿ ನನಗೆ ಮೊದಲಿನಿಂದಲೂ ತೀರದ ಮೋಹ. ಓಡಾಡಿರುವ ಬೀಚ್ ಗಳ ಪೈಕಿ, ಮನಸ್ಸಿಗೆ ಆಹ್ಲಾದ ನೀಡಿ, ಅತ್ಯಂತ ಆಪ್ತವೆನಿಸಿದ ಸಮುದ್ರತೀರಗಳಲ್ಲಿ, ಕುಂದಾಪುರ ಸಮೀಪದ ಕೋಡಿ ಬೀಚ್ ಕೂಡ ಒಂದು. ಹಾದಿಬದಿಯುದ್ದಕ್ಕೂ ತೆಂಗಿನ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಡಲ ನೀರು, ಸಮುದ್ರದ ನಿರಂತರ ಅಲೆಗಳ ಶಬ್ಧ, ನಿಯಮಿತವಾಗಿ ಕಾಪಾಡಿರುವ ಕಡಲ ಸ್ವಚ್ಚತೆ, ಎಲ್ಲವೂ ಕಣ್ಮನಗಳನ್ನು ತಣಿಸಿ, ಮನಸ್ಸಿಗೆ ಶಾಂತತೆಯನ್ನುಸಿಗುವುದರಲ್ಲಿ ಎರಡು ಮಾತಿಲ್ಲ. ಪಂಚಗಂಗಾವಳ್ಳಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ದೃಶ್ಯವನ್ನು ಕಾಣಬಹುದಾದ ಈ ರಮಣೀಯ ಬೀಚ್ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೬ ಕಿಮೀ ದೂರದಲ್ಲಿ(ಉಡುಪಿಯಿಂದ ೩೮ ಕಿಮೀ). ರಂಗಿನೋಕುಳಿ ಹರಡಿ, ಕಡಲ ಮಧ್ಯೆ ಮುಳುಗುವ ಸೂರ್ಯ ನನ್ನು ನೋಡುತ್ತಾ, ತೀರದ ಮರಳ ರಾಶಿಯ ಮೇಲೆ ವಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಮಕ್ಕಳೊಡನೆ ಸಮುದ್ರದಲೆಗಳಿಗೆ ಬೆನ್ನೊಡ್ಡಿಆಟವಾಡಲು ಹೇಳಿ ಮಾಡಿಸಿದಂತಹ ಜಾಗ. ಬೋಟಿಂಗ್ ವ್ಯವಸ್ಥೆ, ಜೋಕಾಲಿ, ಸರ್ಫಿಂಗ್ ಟ್ರೇನಿಂಗ್ ಗಳೆಲ್ಲವೂ ಪ್ರಾರಂಭವಾಗಿ ಈ ಸ್ಥಳ ಇದೀಗ ಮತ್ತಷ್ಟು ಪ್ರಸಿದ್ಧಿಗೊಂಡಿದೆ.