ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಶ್ವ ಭೂಮಿ ದಿನ

ಇಮೇಜ್
"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!!  ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ,  ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡ...

kodi beach

ಕಡಲ ತೀರದ ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ ಮತ್ತು ಸಮುದ್ರದ ಅಲೆಗಳ ಬಿಳುಪು ಕುರಿತಾಗಿ ನನಗೆ ಮೊದಲಿನಿಂದಲೂ ತೀರದ ಮೋಹ. ಓಡಾಡಿರುವ ಬೀಚ್ ಗಳ ಪೈಕಿ, ಮನಸ್ಸಿಗೆ ಆಹ್ಲಾದ ನೀಡಿ, ಅತ್ಯಂತ ಆಪ್ತವೆನಿಸಿದ ಸಮುದ್ರತೀರಗಳಲ್ಲಿ, ಕುಂದಾಪುರ ಸಮೀಪದ ಕೋಡಿ ಬೀಚ್ ಕೂಡ ಒಂದು. ಹಾದಿಬದಿಯುದ್ದಕ್ಕೂ ತೆಂಗಿನ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಡಲ ನೀರು, ಸಮುದ್ರದ ನಿರಂತರ ಅಲೆಗಳ ಶಬ್ಧ, ನಿಯಮಿತವಾಗಿ ಕಾಪಾಡಿರುವ ಕಡಲ ಸ್ವಚ್ಚತೆ, ಎಲ್ಲವೂ ಕಣ್ಮನಗಳನ್ನು ತಣಿಸಿ, ಮನಸ್ಸಿಗೆ ಶಾಂತತೆಯನ್ನುಸಿಗುವುದರಲ್ಲಿ ಎರಡು ಮಾತಿಲ್ಲ. ಪಂಚಗಂಗಾವಳ್ಳಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ದೃಶ್ಯವನ್ನು ಕಾಣಬಹುದಾದ ಈ ರಮಣೀಯ ಬೀಚ್ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೬ ಕಿಮೀ ದೂರದಲ್ಲಿ(ಉಡುಪಿಯಿಂದ ೩೮ ಕಿಮೀ). ರಂಗಿನೋಕುಳಿ ಹರಡಿ, ಕಡಲ ಮಧ್ಯೆ ಮುಳುಗುವ ಸೂರ್ಯ ನನ್ನು ನೋಡುತ್ತಾ, ತೀರದ ಮರಳ ರಾಶಿಯ ಮೇಲೆ ವಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಮಕ್ಕಳೊಡನೆ ಸಮುದ್ರದಲೆಗಳಿಗೆ ಬೆನ್ನೊಡ್ಡಿಆಟವಾಡಲು ಹೇಳಿ ಮಾಡಿಸಿದಂತಹ ಜಾಗ. ಬೋಟಿಂಗ್ ವ್ಯವಸ್ಥೆ, ಜೋಕಾಲಿ, ಸರ್ಫಿಂಗ್ ಟ್ರೇನಿಂಗ್ ಗಳೆಲ್ಲವೂ ಪ್ರಾರಂಭವಾಗಿ ಈ ಸ್ಥಳ ಇದೀಗ ಮತ್ತಷ್ಟು ಪ್ರಸಿದ್ಧಿಗೊಂಡಿದೆ.