ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಜಗಲ್ ಬೆಟ್ಟ

ಇಮೇಜ್
 ಇಂದು World Tourism Day/ವಿಶ್ವ ಪ್ರಾವಾಸೋದ್ಯಮ ದಿನ. ಪ್ರವಾಸ ಎನ್ನುವುದು ಕೆಲವರಿಗೆ ವ್ಯಾಪಾರದಂತಹ ಸ್ವಕಾರ್ಯದ ಉದ್ದೇಶಕ್ಕಾಗಿಇದ್ದರೆ , ಕೆಲವರಿಗೆ ಮನರಂಜನೆ, ವಿರಾಮ, ಸತ್ಕಾರ್ಯಕ್ಕಾಗಿ ಮಾಡುವ ಪ್ರಯಾಣವಾಗಿರಬಹುದು. ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯಾವಶ್ಯಕ. ಮಕ್ಕಳಿಗೆ ಪ್ರತಿ ಹೊಸತುಗಳು ಕೂಡ ಕಲಿಕೆ. ಗೆಳೆಯರೊಂದಿಗೆ ಮಕ್ಕಳೊಂದಿಗೆ ನಿನ್ನೆ ಟ್ರೆಕಿಂಗ್ ಹೋದ 'ನಿಜಗಲ್ ಬೆಟ್ಟ' ದ ಕುರಿತಾಗಿ ಒಂದು ಝಲಕ್.  ನಿಜಗಲ್ ಬೆಟ್ಟ ಬೆಂಗಳೂರಿನಿಂದ ೬೦ ಕಿಮೀ ದೂರದಲ್ಲಿ, ತುಮಕೂರಿಗೆ ಹೋಗುವ ಮಾರ್ಗದಲ್ಲಿ ದೊಬ್ಬಸ್ಪೇಟ್ ಎಂಬ ಊರಿನ ತಪ್ಪಲಿನಲ್ಲಿದೆ. ಅರ್ಧ ದಿನದ ಚಾರಣಕ್ಕೆ ಹೋಗಬಹುದಾದ ಸ್ಥಳಗಳಲ್ಲಿ ಇದೂ ಒಂದು. ೧೭ನೇ ಶತಮಾನದಲ್ಲಿ, ಚಿಕ್ಕದೇವರಾಯ ಒಡೆಯರ್ ಅವರ ಆಳ್ವಿಕೆಯ ಕಾಲದ ಈ ಬೆಟ್ಟದಲ್ಲಿ ಪಾಳುಬಿದ್ದ ದೇವರ ಮಂಟಪಗಳು, ಗುಹೆಗಳು ಮತ್ತು ಕೋಟೆಕಲ್ಲುಗಳನ್ನು ನೋಡಬಹುದಾಗಿದೆ. ದೇವಾಲಯಗಳ ಕಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಸುಂದರವಾದ ಕೆತ್ತನೆಗಳಿವೆ. ಹೈದರಾಲಿ ಮತ್ತು ನಡುವೆ ಕಾದಾಟವೂ ಇಲ್ಲಿ ನಡೆದಿತ್ತು ಎಂಬ ಐತಿಹಾಸಿಕ ಕಥೆಯಿದೆ. ನಾವು ಸ್ನೇಹಿತರಬಳಗದವರು ನಮ್ಮ ೬-೮ ವರ್ಷದ ಮಕ್ಕಳನ್ನು ಕರೆದುಕೊಂಡು, ಮಾತುಕಥೆಯಾಡುತ್ತ ನಡೆದದ್ದರಿಂದ, ಉತ್ಸಾಹದಲ್ಲಿ ೭-೮ ಕಿ.ಮೀ ನಷ್ಟು ಟ್ರೆಕಿಂಗ್ ಮಾಡಿದ್ದೇ ತಿಳಿಯಲಿಲ್ಲ. ಮಕ್ಕಳಿಗೆ ನೈಸರ್ಗಿಕ ಕಲ್ಲು ...