ಪೋಸ್ಟ್‌ಗಳು

It's all a misunderstanding!

  I had attended a summer camp which was conducted near my village in my summer holidays. It was an 8 day camp. There were 16 people in total :11 girls and 5 boys. I enjoyed my stay there. One day as I was walking in the corridor, a boy suddenly came up to me and started screaming " How dare to talk to my father like that!". I was shocked "What? I did'nt speak anything about your father". I was replied with a death stare and a warning " If I see you talking about my father again, things won't be good for you". As I did'nt take part in this nonsense, I decided to ignore this boy. But on the next morning, the boy came with his four friends and started bullying me. They used to trobule me by : calling names, hitting me on the head, purposefully stepping on my drawings and so on. It was painful to be the victom. Sometimes I would feel to cry. But I kept my mind strong. When I got bullied I would tell myself "You were'nt in this mess. Let t...

ಪ್ಲೇಟು ಲೋಟ ಸುದ್ದಿ!

ಇಮೇಜ್
ಆರ್ಟ್ ವರ್ಕ್ ಕೆಲಸಕ್ಕಾಗಿ ಗೆಳತಿಯ ಮನೆಗೆ ಹೋಗಿದ್ದೆ. ಅವರದ್ದು ಒಂದು ಲೇಔಟಿನಲ್ಲಿ ಸ್ವಂತ ಮನೆ. ಅಲ್ಲಿ ಸುಮಾರು ೧೨೦೦ ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿಗೊಂದು ದೇವಸ್ಥಾನ. ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದರ ಜೊತೆಗೆ ದಾನಿಗಳ ಕೊಡುಗೆಗಳಿಂದ ಪ್ರತೀ ಶನಿವಾರ ಮಧ್ಯಾಹ್ನ ಒಂದು ೨೫೦ ಮಂದಿಗೆ ಊಟಕ್ಕೆ ಅವಕಾಶವಾಗುವಂತೆ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಪ್ರತೀ ಶನಿವಾರ! ಯಾರಾದರೂ ಬಂದು ಪ್ರಸಾದ ಸ್ವೀಕರಿಸಬಹುದು. ನಿನ್ನೆ ಹನುಮ ಜಯಂತಿ. ನಮ್ಮದೂ ಕೂಡ ಒಂದು ಭೇಟಿ ನಿಕ್ಕಿಯಾಗಿತ್ತು. ಅಲ್ಲಿಯ ಅನ್ನ ಸಂತರ್ಪಣೆ ವ್ಯವಸ್ಥೆ ನೋಡಿದೆ. ಸ್ಟೀಲ್ ತಟ್ಟೆಗಳಲ್ಲಿ ಊಟ ವಿತರಣೆ. ಮಕ್ಕಳಿಗೆ ತುಸು ಚಿಕ್ಕ ಪ್ಲೇಟ್. ಕೈಯಲ್ಲಿ ಹಿಡಿದರೆ ಭಾರವಾಗದಿರಲೆಂದು. ಉಳಿದದ್ದೆಲ್ಲ ದೊಡ್ಡ ತಟ್ಟೆಗಳು. ದೇವಸ್ಥಾನದ ಪಕ್ಕದಲ್ಲಿಯೇ ತಟ್ಟೆಗಳನ್ನು ತೊಳೆದು ಬುಟ್ಟಿಯೊಂದಕ್ಕೆ ಹಾಕುವ ವ್ಯವಸ್ಥೆ. ತಟ್ಟೆ ತೊಳೆಯುವುದು ನಮ್ಮ ಕರ್ತವ್ಯವಾಗಿರಬೇಕು. ಕೆಲವರು ತಟ್ಟೆಯನ್ನು ಶಿಸ್ತಿನಿಂದ ತೊಳೆಯಬಹುದು. ಕೆಲವರು ಅದರಲ್ಲಿಯೂ ಮಕ್ಕಳಿಗೆ ಸರಿಯಾಗಿ ತೊಳೆಯಲು ಬಾರದೆ ಇರಬಹುದು. ಅದಕ್ಕೂ ವ್ಯವಸ್ಥೆ ಇದೆ. ಮಹಿಳೆಯೊಬ್ಬಳು ಆ ಬುಟ್ಟಿಯಲ್ಲಿರುವ ತಟ್ಟೆಯನ್ನು ಇನ್ನೊಮ್ಮೆ ಚೆನ್ನಾಗಿ ತೊಳೆದು ಕೊಡುತ್ತಾಳೆ. ಪಾತ್ರೆ ತೊಳೆದ ನೀರೆಲ್ಲ ವ್ಯವಸ್ಥಿತವಾಗಿ ಉದ್ಯಾನವನದ ಗಿಡಗಂಟೆಗಳಿಗೆ ಮರುಬಳಕೆಗೆ. ಹೆಚ್ಚು ನಿವಾಸಿಗಳು ಇರುವ ಇಂತಹ ಸ್ಥಳಗಲ್ಲಿ ಹಂಚಿಕೊಂಡಾಗ ಹೆಚ್ಚೇನೂ ಖರ್ಚು ಬರು...

ಸಿಕ್ಕಿಂನ ತ್ಸೋಮಗೊ ಸರೋವರ

ಇಮೇಜ್
ಸಿಕ್ಕಿಂನ ತ್ಸೋಮಗೊ ಸರೋವರದ ಬಿಂಬ - ಪ್ರತಿಬಿಂಬ  ತ್ಶೋಮ್ಗೊ ಸರೋವರವು ನಾಥುಲಾ ಪಾಸ್‌ಗೆ ಹೋಗುವ ಮಾರ್ಗದಲ್ಲಿ 4,045 ಮೀಟರ್ ಎತ್ತರದಲ್ಲಿದೆ. ಸಾಮಾನ್ಯವಾಗಿ ಸರೋವರಗಳು ಸಾಗರತಟಕ್ಕೆ ಸಮಾನಾಂತರವಾಗಿ ಇರುತ್ತವೆ. ಆದರೆ ಇದು ಸಮುದ್ರತಟದಿಂದ ಸುಮಾರು ಹನ್ನೆರಡೂವರೆ ಸಾವಿರ ಅಡಿ ಎತ್ತರದಲ್ಲಿದ್ದು ದೇಶದ ಅತೀ ಎತ್ತರದಲ್ಲಿರುವ ಸರೋವರಗಳಲ್ಲೊಂದಾಗಿದೆ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ಇದರ ನೀರು ಬೇಸಿಗೆಯಲ್ಲಿ ಹಸಿರು ಮಿಶ್ರಿತ ನೀಲಿ ಬಣ್ಣದ ತಿಳಿನೀರಾಗಿ ಪರಿವರ್ತಿತವಾಗುತ್ತದೆ. ಆ ನೀರಿನಲ್ಲಿ ಕಾಣುವ ಅಕ್ಕಪಕ್ಕದ ಶಿಖರಗಳ ಮತ್ತು ಶುಭ್ರ ನೀಲಾಕಾಶದ ಬಿಂಬ ನಯನಮನೋಹರವಂತೆ. Tsomgo ಸರೋವರವು ಸುಮಾರು 1 ಕಿಮೀ ಉದ್ದವಿದೆ;ಅಂಡಾಕಾರದ ಆಕಾರ, 15 ಮೀಟರ್ ಆಳ ಮತ್ತು ಸ್ಥಳೀಯ ಜನರು ಪವಿತ್ರವೆಂದು ಪರಿಗಣಿಸುತ್ತಾರೆ. ಅಂದಿನ ದಿನ ಮೋಡ ಮಿಶ್ರಿತ ಮಳೆಯ ದಿನವಾದ್ದರಿಂದ ನಮಗೆ ಸಿಕ್ಕ  ಬಿಂಬ ಪ್ರತಿಬಿಂಬವಿಷ್ಟು. ಪೂರ್ವ ಸಿಕ್ಕಿಂನ ಪಾಥಿಂಗ್ ಪ್ರದೇಶದ ಸ್ಥಳೀಯ ಕುಲಪತಿಗಳ ಪ್ರಕಾರ ಸರೋವರದ ಮೂಲ ಹೆಸರು "ತಾನ್ಯೆಕ್ ತ್ಶೋ". ಸೈನ್ಯದಿಂದ "ಎಲಿಫೆಂಟಾ ಲೇಕ್". 'ನಬ್ ತಾನೆಕ್ ತ್ಶೋ' ಎಂದರೆ-'ಪಶ್ಚಿಮದಲ್ಲಿ ಕುದುರೆ ಬಾಲದ ಸರೋವರ, ಇದು ಪ್ರಸ್ತುತ ತ್ಸೋಮ್ಗೊ ಸರೋವರವನ್ನು ಸೂಚಿಸುತ್ತದೆ. ಸಿಕ್ಕಿಂನ ಗ್ಯಾಸೆಟಿಯರ್ ಇದನ್ನು "ತಾನಿಟ್ಜೋ= ತಾನ್ಯೆಕ್ತ್ಶೋ, ಕುದುರೆ ಬಾಲದ ಸರೋವರ ಅಥವಾ ಕುದುರೆ ಕೂದಲಿನ ...

ಕೊತ್ತಂಬರಿ ಸೊಪ್ಪಿನ ದಂಟಿನ ಗಟ್ಟಿ ಚಟ್ನಿ - ದೇಹದ ಸ್ವಚ್ಛತೆಗೆ ರಾಮಬಾಣ!

ಇಮೇಜ್
ಬೇಡಿಕೆಗೆ ತಕ್ಕಂತೆ ಪೂರೈಕೆ ಎಂಬ ಈಗಿನ ಮಾರುಕಟ್ಟೆಯ ವೇಗಕ್ಕೆ, ಎಲ್ಲೆಯಿಲ್ಲದಂತೆ ಸಾಗುತ್ತಿರುವ ರಾಸಾಯನಿಕ ಸಿಂಪಡಿತ, ತರಕಾರಿ ಹಣ್ಣುಗಳನ್ನೇ ಲಾಭಕ್ಕಾಗಿ ಬೆಳೆಯುತ್ತಿರುವವರ ಮಧ್ಯೆ, ಸಾವಯವ ಬೆಳೆ ಬೆಳೆಯುವವರ ಸಂಖ್ಯೆ ಕಡಿಮೆಯೇ. ಸ್ನೇಹದ ಸಂಕೇತವಾಗಿ, ತಾವು ಬೆಳೆದ ಸಾವಯವ ತರಕಾರಿಗಳನ್ನು ಕಳೆದ ವಾರ ಮಾನಸ ಗಿರೀಶ್ ನಮ್ಮ ಮನೆಗೆ ಬಂದು ತಂದು ಕೊಟ್ಟಾಗ, ಸಂತೋಷ ಮತ್ತು ಕೃತಜ್ಞತೆಗೆ ಮಾತೇ ಹೊರಡದಾಯಿತು ಒಮ್ಮೆ ನನಗೆ. ಅವರು ನೀಡಿದ ಪ್ರತಿಯೊಂದು ತರಕಾರಿ ಸೊಪ್ಪುಗಳನ್ನು, ಒಂದಂಶ ಕೂಡ ನಿರುಪಯುಕ್ತವಾಗಿ ಹೋಗದಂತೆ, ಸಾಂಬಾರು, ಸಾಸ್ವೆ, ಪರೋಟ, ತರಕಾರಿ ಸಿಪ್ಪೆಯ ತರಹೇವಾರಿ ಚಟ್ನೆಗಳು ಇತ್ಯಾದಿಯಾಗಿ ಸಂತೋಷದಿಂದ ಬಳಸಿಕೊಂಡು ಉಂಡೆವು.  ಸೊಪ್ಪಿನ ವಿಷಯಕ್ಕೆ ಬಂದರೆ, ಸಾಮಾನ್ಯವಾಗಿ ನಾವು ಸೊಪ್ಪನ್ನು ತೊಳೆದು, ಅದರಲ್ಲಿ ಬಲಿತ, ಬಾಡಿದ, ಕೊಳೆತ ಇತ್ಯಾದಿ ಭಾಗಗಳನ್ನು ಬಿಡಿಸಿ ತೆಗೆದು ಬಳಸುವಷ್ಟರಲ್ಲಿ ಅರ್ಧಕ್ಕರ್ಧ ಸೊಪ್ಪು ನಿರರ್ಥಕವಾಗಿ ಕಸದಬುಟ್ಟಿಗೆ ಹೋಗುತ್ತದೆ. ನಾನೇ ನೋಡಿದಂತೆ, ಕೊತ್ತಂಬರಿ ಸೊಪ್ಪಿನ ಕಟ್ಟನ್ನು ತಂದರೆ, ಅದೆಷ್ಟೋ ಜನ ಕೇವಲ ಹಸಿರು ಸೊಪ್ಪನ್ನಷ್ಟೇ ಬಳಸಿಕೊಂಡು, ಅದರ ದಂಟನ್ನು ಬಿಸಾಡುತ್ತಾರೆ. ಆದರೆ ವಿಟಾಮಿನ್ ಏ, ಸೀ ಮತ್ತು ಕೆ, ಫೋಲೇಟ್ ಪೊಟ್ಯಾಸಿಯಮ್ ಮ್ಯಾಂಗನೀಸ್ ಪೌಷ್ಟಿಕಾಂಶದ ಆಗರವಾಗಿರುವ ಕೊತ್ತಂಬರಿ ಸೊಪ್ಪಲ್ಲಿ, ಅದರ ಎಲೆಗಳು ಮಾತ್ರವಲ್ಲದೆ, ದಂಟಿನಲ್ಲಿಯೂ ಕೂಡಾ ಈ ಎಲ್ಲಾ ಅಂಶಗಳು ಅಡಕವಾಗಿ...

ಮಹಾಕುಂಭಮೇಳ - ಆರಕ್ಷಕರ ವಿನಮ್ರತೆ

ವಿಮಾನದಿಂದಿಳಿದು ವಾರಾಣಸಿ ತಲುಪಿದ್ದೆವು ಆ ದಿನ ರಾತ್ರಿ. ಮರುದಿನಕ್ಕೆ ಪ್ರಯಾಗರಾಜ್ಗೆ ಹೊರಡುವ ಮುನ್ನ, ಕಾಶೀ ವಿಶ್ವನಾಥನನ್ನೊಮ್ಮೆ ಸ್ಪರ್ಶದರ್ಶನ ಮಾಡಿ ಹೊರಡುವುದು ಎಂದು ಪ್ಲಾನ್ ಆಗಿತ್ತು. ೪ ಗಂಟೆಯ ದರ್ಶನಕ್ಕೆ ಬೆಳಗಿನ ಜಾವ ೨.೩೦ ಎದ್ದು ಹೋಗಿಯಾಗಿತ್ತು. ಗಲ್ಲಿಗಲ್ಲಿಗಳ ದಾಟಿ, ಮಾತಾ ಅನ್ನಪೂರ್ಣ ಭವನದ ಪಕ್ಕದಲ್ಲಿ ಸರತಿಯಲ್ಲಿ ನಿಂತೆವು. ಕೊರೆವ ೭ ಡಿಗ್ರಿ ಚಳಿ ಇನ್ನೂ ಒಂದು ಗಂಟೆ ಕಾಯಬೇಕು ಗೇಟು ತೆರೆಯಲು. ನಮ್ಮ ಗುಂಪಿನಲ್ಲಿದ್ದ ಹಿರಿಯರೊಬ್ಬರಿಗೆ ಬಾಯಾರಿಕೆ ಆಗತೊಡಗಿತು. ಆದರೆ ಗಡಿಬಿಡಿಯಲ್ಲಿ ನೀರು ತಂದಿಲ್ಲ. ಸುತ್ತಮುತ್ತ ಎಲ್ಲಿ ನೋಡಿದರೂ ಬಾಗಿಲು ಮುಚ್ಚಿ ನಿದ್ರಿಸುತ್ತಿರುವ ಗಲ್ಲಿಗಳಷ್ಟೇ. ೩.೪೦ ಸುಮಾರಿಗೆ ಆ ರಸ್ತೆಯ ಒಬ್ಬ ಪೂಜಾಸಾಮಗ್ರಿ ಅಂಗಡಿಯವ ಬಾಗಿಲು ತೆರೆಯಲಾರಂಭಿಸಿದ. ತಕ್ಷಣವೇ ಹೋಗಿ ನೀರಿನ ಬಾಟಲಿ ಕೇಳಿದೆ. ಇಲ್ಲ ಎಂಬ ಉತ್ತರ ನಿರಾಸೆ ತಂದಿತು. ಅಕ್ಕನಿಗೆ ಬಿಕ್ಕಳಿಕೆ ಕೂಡ ಪ್ರಾರಂಭವಾಯಿತು ಈಗ ನೀರಿನ ಅವಶ್ಯಕತೆ ತುಂಬಾ ಇತ್ತು. ಭಕ್ತರ ಕ್ಯೂ ಸಂಭಾಳಿಸಲು ಅಲ್ಲಿ ಪೊಲೀಸ್ ಗಸ್ತು ಇರುತ್ತದೆ. ಇದು ವೈಯುಕ್ತಿಕ ವಿಷಯ, ಆರಕ್ಷಕರ ಸಹಾಯ ಸಿಗುವ ಸಾಧ್ಯತೆ ಕಮ್ಮಿ ಎಂದೆನಿಸಿದರೂ ಒಂದು ಪ್ರಯತ್ನ ಮಾಡಿದೆ. ಹತ್ತಿರದಲ್ಲಿ ಗಸ್ತಿನಲ್ಲಿದ್ದ ಒಬ್ಬರಿಗೆ, ನಮಗೆ ನೀರಿನ ಅವಶ್ಯಕತೆ ಇರುವುದಾಗಿ ತಿಳಿಸಿದೆ. ಒಮ್ಮೆ ನನ್ನನ್ನೂ, ಮುಂದಕ್ಕೆ ಸರತಿಯಲ್ಲಿ ನಿಂತಿರುವ ನನ್ನ ಹಿರಿಯ ಸ್ನೇಹಿತರನ್ನೂ ದುರುಗುಟ್ಟಿ ನೋಡಿದ. "ನಿಮ...