ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಶಿಮಾ

ಟಿಕ್ ಟಾಕ್ ಟೋ  ಯಾರು ಕೇಳಿಲ್ಲ? ಸಾಮಾನ್ಯವಾಗಿ ಎಲ್ಲರಿಗೂ ಈ ಆಟದ ಪರಿಚಯ ಇದ್ದೇ ಇರುತ್ತದೆ. ಎಲ್ಲೋ ಪೇಪರ್ರು ಪೆನ್ನು ಕಂಡರೆ ಸಾಕು, ಅಲ್ಲೇ ಮೂರು ಅಡ್ಡ ಉದ್ದ ಗೆರೆ ಹಾಕಿ ಒಂಭತ್ತು ಮನೆ ಮಾಡಿ, ಬಾ ಆಡು.." ಎಂದು ಪಕ್ಕದವರನ್ನು ಕರೆದು ಆಡಿಬಿಡುವಷ್ಟುಸರ್ವೇ ಸಾಮಾನ್ಯ ಆದರೂ ತಂತ್ರ ಹೂಡಿ ಆಡುವ ಆಟವದು. ಬೋರ್ಡ್ ಗೇಮ್ಸ್ ಗಳ ಹುಚ್ಚಿರುವ ಮಗಳಿಗೆ ಎಲ್ಲೆಲ್ಲಿ ಏನೇನು ಹೊಸ ಆಟಗಳ ಬಗೆ ಸಿಗುತ್ತದೋ ಅವೆಲ್ಲ ತೋರಿಸುವ, ಕಲಿಸುವ ಹುಚ್ಚು ನನಗೂ ಇದೆ. ಹೀಗೆಯೇ ಸಿಕ್ಕ ಮತ್ತೊಂದು ಬೋರ್ಡ್ ಗೇಂ - 'ಶಿಶಿಮಾ' ಕೀನ್ಯಾ ಮೂಲದಿಂದ ಬಂದಿರುವ ಶಿಶಿಮಾ ಆಟ ಹೆಚ್ಚು ಕಮ್ಮಿ ಟಿಕ್ ಟ್ಯಾಕ್ ಟೋ ಆಟವೇ ಆದರೆ ಅಷ್ಟಭುಜಾಕೃತಿಯಲ್ಲಿ ರೂಪಿಸಲಾಗಿದೆ. ಕೀನ್ಯಾದ ಸ್ಥಳೀಯ ಭಾಷೆಯೊಂದರ ಪ್ರಕಾರ ಶಿಶಿಮಾ ಪದದ ಅರ್ಥ ನೀರಿನ ಹಳ್ಳ. ಈ ಆಟವನ್ನು ಆಡಲು ಬಳಸುವ ಕಾಯಿಗಳನ್ನು ಇಂಬಲವಲಿ ಎಂದು ಕರೆಯುತ್ತಾರೆ. ಅದು ನೀರ ಮೇಲೆ ಚುರುಕಾಗಿ ಓಡಾಡುವ ಕೀಟಗಳು ಎಂಬ ಅರ್ಥ.   ಒಂದು ವರ್ತುಲವನ್ನು ನಾಲ್ಕು ರೇಖೆಗಳು ಮಧ್ಯ ಬಿಂದುವಿನಿಂದ ಹಾದು ಹೋಗಿ ಎಂಟು ಸ್ಥಾನಗಳನ್ನು ಹೊಂದಿರುವಂತಹ ಅಷ್ಟಭುಜಾಕೃತಿಯ ಪಟವಿದು. ಎರಡು ಜನರು ಆಡಬಹುದಾದಂತಹ ಈ ಆಟದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೂರು ಕಾಯಿಗಳು ಇರುತ್ತವೆ. ಮೊದಲಿಗೆ ಆಟಗಾರರು ಒಂದು ಸಲಕ್ಕೆ ಒಂದು ಕಾಯಿಯಂತೆ ಮೂರು ಬಿಂದುಗಳ ಮೇಲೆ ಇಡಬೇಕು. ನಂತರಕ್ಕೆ ಎದುರಾಳಿಯ ಆಟದ ...

ನಮ್ಮ ಭಾಷೆ ಕನ್ನಡ - ಅಕ್ಷರಕ್ಕೊಂದು ಗಾದೆ ಮಾತು

ಇಮೇಜ್
ನಮ್ಮ ಭಾಷೆ ನಮ್ಮ ಹೆಮ್ಮೆ.. ಈ ಕನ್ನಡ ರಾಜ್ಯೋತ್ಸವದ ವಿಶೇಷ ದಿನವನ್ನು ನನ್ನಿಷ್ಟದ ಕಲೆಯ ಮೂಲಕ ಸಂಭ್ರಮಿಸೋಣ ಎಂಬ ಇಚ್ಛೆಯಿಂದ ಕಳೆದ ೫೯ ದಿನಗಳಿಂದ ದಿನಕ್ಕೊಂದರಂತೆ ಕನ್ನಡದ ಅಕ್ಷರಗಳನ್ನು ಚಿತ್ರಿಸಿ ಹಂಚಿಕೊಳ್ಳುತ್ತಿದ್ದಲಿದ್ದೆ.ಕನ್ನಡ ಮಾತನಾಡುವ ಜೊತೆಜೊತೆಯಲ್ಲೇ, ಗಾದೆಮಾತುಗಳ ಬಳಕೆ ನಮ್ಮ ನುಡಿಯನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ನಾನು ಬರೆಯುವ ಅಕ್ಷರಕ್ಕೆ ನಿಮಗೆ ತಿಳಿದ ಗಾದೆಮಾತುಗಳನ್ನು ಹಂಚಿಕೊಳ್ಳಿ ಎಂದು ಸ್ನೇಹಿತರಲ್ಲಿಯೂ ವಿನಂತಿಸಿದ್ದೆ. ಕಲ್ಪನೆಗೂ ಮೀರಿ ಬಂದ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಮತ್ತಷ್ಟು ಚಿತ್ರಗಳನ್ನು ರಚಿಸಲು ಹುರುಪು ನೀಡಿತ್ತು. ನಾನು ರಚಿಸಿದ ಕನ್ನಡ ಅಂಕಾಕ್ಷರಗಳು ಮತ್ತು ಅವುಗಳಿಗೆ ಪೂರಕವಾದ ಗಾದೆಮಾತುಗಳು ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರ ಬೆಂಬಲ ಮತ್ತು ಭಾಗವಹಿಸುವಿಕೆಗೆ ನಾನು ಕೃತಜ್ಞಳು. ಮತ್ತೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ, ಶುಭಾಶಯಗಳು  #ಸಿರಿಗನ್ನಡಂಗೆಲ್ಗೆ #ಕರ್ನಾಟಕರಾಜ್ಯೋತ್ಸವ  ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಅಲ್ಪನ್ಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ ಅತಿಯಾಸೆ ಗತಿಗೇಡು ಅತಿಯಾದರೆ ಅಮೃತವೂ ವಿಷ. ಅಡ್ಡ ಗೋಡೆ ಮೇಲೆ ದೀಪ ಇತ್ತಂತೆ ಅಂಚು ಮೆಟ್ಟಿ ಅಡಿ ಮೆಟ್ಟಿ ನಡುಮನೆಗೆ ಕಾಲಿಟ್ಟ ಹಾಗೆ ಅಜ್ಜಿಗೆ ಅರಿವೆ ಚಿಂತೆ. ಮೊಮ್ಮಗಳಿಗೆ ಮಿಠಾಯಿ ಚಿಂತೆ. ಅಲ್ಪರ ಸಂ...

ಕಂಡೆ ನಾ ಬದರಿಯ..

ಇಮೇಜ್
ಸತತವಾದ ೪ ದಿನಗಳ ವ್ಯಾಲಿ ಆಫ್ ಪ್ಲಾವರ್ಸ್ ಮತ್ತು ಹೇಮಕುಂಡದ ನಮ್ಮ ಚಾರಣ, ಅಂದಿಗೆ ಮುಗಿದಿತ್ತು. ಪಾಂಡುಕೇಶ್ವರದ ಹೋಟೆಲ್ಲಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವುದಷ್ಟೇ ಆ ದಿನಕ್ಕೆ ನಮಗುಳಿದ ಕೆಲಸ. ನಾವು ಬುಕ್ ಮಾಡಿದ್ದ ಟ್ರೆಕ್ಕಿಂಗ್ ಪ್ಯಾಕೇಜ್ ಏಜೆನ್ಸಿಯವರು, 'ಟೀಮ್ ನ ಇಚ್ಛೆಯಿದ್ದಲ್ಲಿ ಆ ದಿನ ಬದರಿನಾಥ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬಹುದು. ವಾಹನದ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಪ್ರಯಾಣ ಮಾತ್ರ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಭಿತ..'  ಎಂಬ ನಿಯಮಿತ ಒಕ್ಕಣೆಯನ್ನು ಮುಂಚಿತವಾಗಿಯೇ ನೀಡಿದ್ದರು. ಬದರಿನಾಥ್ಗೆ ಹೋಗುವ ಆಶಾಭಾವನೆಯಿಂದ ನಾವೆಲ್ಲರೂ ಘಾನ್ಗ್ರಿಯದಿಂದ ಪುಲ್ನವರೆಗಿನ ನಮ್ಮ ಅವರೋಹಣವನ್ನು ಸಾಧ್ಯವಾದಷ್ಟು ಚುರುಕಾಗಿ ಮುಗಿಸಿ ಬಂದಿದ್ದೆವು. ಬದರಿನಾಥ್ ಗೆ ಹೋಗುವ ಉತ್ಸಾಹ ಯಾರ ಮುಖದಲ್ಲೂ ಚಾರಣದ ಸುಸ್ತನ್ನು ಮೂಡಿಸಿರಲಿಲ್ಲ.. ಆದರೆ,  'ಹಿಂದಿನ ದಿನ ಸುರಿದ ಸತತ ಮಳೆಯ ಕಾರಣದಿಂದಾಗಿ, ಬದರಿನಾಥ್ ಗೆ ಹೋಗುವ ರಸ್ತೆಗಳು ಮುಚ್ಚಿದ್ದು, ೫೦೦ ಕ್ಕೂ ಹೆಚ್ಚು ವಾಹನಗಳು ನಿಲುಗಡೆಯಲ್ಲಿವೆ, ಸಾವಿರಾರು ಭಕ್ತರು ಕಾಯ್ವಿಕೆಯಲ್ಲಿದ್ದಾರೆ, ಯಾವಾಗ ರಸ್ತೆ ತೆರೆಯುವುದೋ ತಿಳಿಯದು, ಹೋಗಿ ನೋಡಬೇಕೀಗ, ' ಎಂದು ನಮ್ಮ ಡ್ರೈವರ್ ಕೊಟ್ಟ ಮಾಹಿತಿಗೆ ಒಮ್ಮೆ ನಿರಾಸೆಯೆನಿಸಿದರೂ, ಭರವಸೆಯನ್ನು ಕಳೆದುಕೊಳ್ಳದೆ ಎಲ್ಲರೂ ಚುರುಕಾಗಿ ಪಾಂಡುಕೇಶ್ವರ್ ಗೆ ಹೊರಟು ಬಂದೆವು. ಪಾಂಡುಕೇಶ್ವರ್ ಸಮೀಪಿಸುತ್ತಿದ್ದಂತೆಯೂ, ...

ಕಂಚೀಕಾಯಿ ಚಟ್ನೆ

ಕಂಚೀಕಾಯಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕಡೆ ಸಿಗುವ ನಿಂಬೆ ಪಂಗಡಕ್ಕೆ ಸೇರಿದ ಒಂದು ಹಣ್ಣು. ನಾರಿಂಗ ಏಳಚೀಕಾಯಿ, citron, kaffir lime ಇತ್ಯಾದಿ ಹೆಸರುಗಳಿಂದ ಇದು ಜನಕ್ಕೆ ಪರಿಚಿತ. ಸಣ್ಣದಾಗಿ ಕಿತ್ತಳೆ ಹಣ್ಣಿನಂತಿರುವ ಇದು ನೋಡಲು ನಿಂಬೆಕಾಯಿಗಿಂತ ದೊಡ್ಡದು ಮತ್ತು ದೊಡ್ಳೀಕಾಯಿಕ್ಕಿಂತ ಸಣ್ಣದು. ಕಂಚಿಕಾಯಿ ಖಾರ ಮತ್ತು ಸಿಹಿ ಉಪ್ಪಿನಕಾಯಿ, ಸಿಪ್ಪೆ ಗೊಜ್ಜು, ನೀರ್ಗೊಜ್ಜು, ಕಂಚಿಹುಳಿ ಬೆಳ್ಳುಳ್ಳಿ ಹಾಕಿದ ಬಿಸಿ ಬಿಸಿ ಸಾರು, ಇತ್ಯಾದಿ ಅಡುಗೆಗೆ ಕಂಚೀಕಾಯಿ ಬಲು ಪ್ರಸಿದ್ಧ... ಕಂಚಿಕಾಯಿ ಯ ಹುಳಿ ಹಿಂಡಿ ಮಾಡಿದ ಚಿತ್ರಾನ್ನವೆಂತೂ ತಿನ್ನಲು ಬಲು ರುಚಿ..  ಈ ಹಣ್ಣಿನ ಸಿಪ್ಪೆಯಲ್ಲಿರುವ ಎಣ್ಣೆಯ ಅಂಶ (essential oil ) ಕಹಿ ರುಚಿಯನ್ನು ನೀಡುವುದಲ್ಲದೆ. ರೋಗ ನಿರೋಧಕ ಶಕ್ತಿ ಈ ಹಣ್ಣಿನಲ್ಲಿ ಹೇರಳವಾಗಿದೆ. ಮುಖ್ಯವಾಗಿ ಜೀರ್ಣ ಶಕ್ತಿಯನ್ನು ವೃದ್ಧಿಸಲು, ದೇಹ ನಂಜಾದಾಗ, ಜ್ವರ ಬಂದು ಬಾಯಿ ರುಚಿ ಇಲ್ಲದಾದಾಗ, ಇದನ್ನು ತಿಂದರೆ ಒಳ್ಳೆಯದು. ಹೃದಯದ ಆರೋಗ್ಯಕ್ಕೂ ಸಹಾಯಕ.  ಇಡೀ ಕಂಚೀಕಾಯಿ ಸಿಪ್ಪೆ ಸಹಿತವಾಗಿ ಕಾಯಿಯ ಜೊತೆ ಹಾಕಿ ತಿರುವಿ ಮಾಡುವ ಹಸಿ ಚಟ್ನೆ, ಉಣ್ಣಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಕಹಿ ಇದರ ಮೂಲ ರುಚಿ. ಆದರೆ ಅದರ ಜೊತೆಗೆ ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹದವಾಗಿ ಹಾಕಿ ಮಾಡುವ ಈ ಚಟ್ನೆಯನ್ನು, ಬಿಸಿ ಬಿಸಿ ...

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂ...

ತಾಯಂದಿರ ದಿನವಿದು

ಇಮೇಜ್
ನನ್ನ ಅಮ್ಮುಮ್ಮ ನಿಗೆ ಈಗ ೯೪ ವರ್ಷ. ಬಡತನ ಕಷ್ಟ ಕಾರ್ಪಣ್ಯಗಳನ್ನು ಜೀವನದುದ್ದಕ್ಕೂ ಪಡೆದು, ಸಹಿಸಿಕೊಂಡು ಬಂದವಳು ಅವಳು.. ಮನೆ ತುಂಬಾ ಮಕ್ಕಳು. ದೊಡ್ಡ ಮಗಳ ಬಾಳಂತನ ಮತ್ತು ಅಮ್ಮುಮ್ಮನ ಕಿರಿ ಮಗುವಿನ ಬಾಳಂತನ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ನಡೆಯುವಂತಹ ಕಾಲದಲ್ಲಿ, ಪ್ರತಿಯೊಂದನ್ನೂ ಸಂಭಾಳಿಸಿದವಳು..ಕಷ್ಟಕರ ವ್ಯವಸಾಯ ದುಡಿಮೆ, ಆಸ್ತಿ ವ್ಯಾಜ್ಯ ಜಗಳಗಳ ನಡುವೆ ಗಂಡನೊಂದಿಗೆ ಸೂರಿಂದ ಸೂರಿಗೆ ದಾಟುತ್ತ, ಎರಡೇ ಎರಡು ಸೀರೆಯಲ್ಲಿ ತಾನು ಜೀವನ ಮಾಡಿಕೊಂಡು, ೪ ಅಂಗಿ ಚಡ್ಡಿ, ೨ ಲಂಗ ಗಳಲ್ಲಿ ಆರು ಜನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿಕೊಂಡು ಬಂದ ಗಟ್ಟಿಗಿತ್ತಿ ನನ್ನ ಅಮ್ಮುಮ್ಮ.. ಆಗಿನ ಪರಿಸ್ಥಿತಿಯೇ ಹಾಗಿತ್ತು, ಎಲ್ಲರ ಹೊಟ್ಟೆಗೆ ಆಗುವಷ್ಟು ಊಟ ತಿಂಡಿ, ದನಕರಗಳ ಹೊಟ್ಟೆ ಹೊರೆಯುವ ಕೆಲಸ, ಇಷ್ಟರಲ್ಲೇ ದುಡಿಮೆ ಸರಿಯಾಗುತ್ತಿತ್ತು..ಮತ್ತೊಂದಷ್ಟು ಕಷ್ಟಪಟ್ಟು ಉಳಿಸಿಕೊಂಡ ದುಡ್ಡು, ವ್ಯಾಜ್ಯ ಕೋರ್ಟು ಕಚೇರಿ ಎಂದೇ ಕರಗುತ್ತಿತ್ತು..ಒಮ್ಮೆಯಂತೂ ಪೂಜ್ಯ ಶ್ರೀಧರ ಗುರುಗಳು ಮನೆ ಬಾಗಿಲಿಗೆ ಬಂದಾಗ, ಅವರಿಗೆ ದಾನ ನೀಡಲು ಧಾನ್ಯ, ಉತ್ತಮವಾದ ಹಣ್ಣು, ಸಿಹಿ ಅಪ್ಪಚ್ಚಿ  ಏನೂ ಇರದಿದ್ದಾಗ ಕೇವಲ ಬೆಲ್ಲ ಮತ್ತು ಒಂದು ಹಿಡಿ ಅರಳುಕಾಳು ಕೊಟ್ಟು, ಕಾಲಿಗೆ ನಮಸ್ಕರಿಸಿ ಕಳುಹಿಸಿದ ಪ್ರಸಂಗವನ್ನು ಅಮ್ಮುಮ್ಮ ಇವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಆಗದ ಪರಿಸ್ಥಿತಿ ಅವರದ್ದು.. ಮಕ್ಕಳೆಲ್ಲಾ ಎಲ್ಲೆಲ್ಲೋ, ಯಾರ್...

ಮದರಂಗಿ

ಇಮೇಜ್
ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ  ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು  ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು.. ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕ...

ಪದಗಳ ಆಟ

ಇಮೇಜ್
1 . ಮೂರು ಪದ ಒಂದು ಕಥೆ - ಮಕ್ಕಳಿಗೆ ಅವರ ವಯಸ್ಸಿನ ಮಿತಿಗೆ ಅನುಗುಣವಾಗಿ, ಸುಲಭವಾಗಿ ಮಕ್ಕಳು ಗುರುತಿಸಲ್ಪಡುವ ಯಾವುದಾದರೂ ಮೂರು ಪದಗಳನ್ನು ಕೊಟ್ಟು, ಅವುಗಳನ್ನು ಬಳಸಿ ಕಥೆಯೊಂದನ್ನು ಹೆಣೆಯಲು ತಿಳಿಸಬೇಕು. ೫-೬ ವರ್ಷದ ಮಕ್ಕಳ ಕಥೆ ಅರ್ಥಪೂರ್ಣವಾಗಿಯೇ ಇರಬೇಕೆಂಬ ಅಪೇಕ್ಷೆಯಿಲ್ಲ. ಮಕ್ಕಳಿಗೆ ಆ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡುವುದು ಮತ್ತು ಒಂದಕ್ಕೊಂದು ಸಂಬಂಧ ಹೆಣೆಯುವ ಚಾಕ್ಷತೆ ಸಿಕ್ಕರೆ ಸಾಕು. ಮಕ್ಕಳು ಹಿಂದೆ ಕೇಳಿದ ಕಥೆಗಳಿಂದ ಪದಗಳನ್ನು ಹೆಕ್ಕಿ ಹೇಳಿದರೆ, ಕಥೆಯನ್ನು ನೆನಪಿಸಿಕೊಂಡು ತಮ್ಮದೇ ಧಾಟಿಯಲ್ಲಿ ಮಕ್ಕಳು ಕಥೆ ಹೇಳಿವಷ್ಟಾದರೂ ಸಾಕು ಸಂತೋಷ.. ನಮ್ಮ ಕೆಲಸಗಳನ್ನು ಮಾಡುತ್ತಲೇ ಮಕ್ಕಳನ್ನು ಆಡಿಸಬಹುದಾದ ತಮಾಷೆಯ ಆಟವಿದು. ಉದಾ : ಮೋಡ, ನೀರು, ಛತ್ರಿ               ಕಾಗೆ, ನರಿ, ರೊಟ್ಟಿ 2. ಒಂದು ಹುಂಡಿ ಅಕ್ಷರ - ಈ ಆಟವನ್ನು ಬಾಯ್ದೆರೆಯಾಗಿಯೂ ಆಡಬಹುದು, ಕನ್ನಡ ಕಾಗುಣಿತ ಕಲಿತ ಮಕ್ಕಳಾದರೆ, ಇದೊಂದು ಉತ್ತಮ ಬರವಣಿಗೆಯ ಆಟ. ಯಾವುದಾದರೊಂದು ಕನ್ನಡ ಅಕ್ಷರವನ್ನು ಒಬ್ಬರು ತಿಳಿಸುವುದು. ಮಕ್ಕಳು ಚಿಕ್ಕವರಾಗಿದ್ದರೆ, ಆಟವನ್ನು ಸ್ವಲ್ಪ ಸುಲಭವಾಗಿಸಲು, ಆ ಅಕ್ಷರ ಅಥವಾ ಅದರ ಕಾಗುಣಿತಾಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಪದಗಳನ್ನು ಹುಡುಕಿ ಹುಂಡಿಗೆ ಹಾಕುವುದು, ಎಂಬ ಅರ್ಥ ಬರುವಂತೆ ಪದಗಳನ್ನು ಯೋಚಿಸಿ ಹೇಳಲು ಅಥವಾ ಬರೆಯಲು ತಿಳಿಸಬಹುದು. ನಾವು ಮ...

ಚಿತ್ರಸಂತೆಯ ಅನುಭವ

ಚಿತ್ರಸಂತೆ - ಕಲಾಸಕ್ತರಿಗೆ ಒಂದೇ ಸೂರಿನಡಿ ಅನೇಕ ಪ್ರಕಾರದ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡು, ಆಸಕ್ತ ಚಿತ್ರಗಳನ್ನು ಕೊಂಡುಕೊಳ್ಳಲು ಅವಕಾಶ ಸಿಗಬಹುದಾದ ಒಂದು ದಿನದ ಹಬ್ಬ! ಕಲೆಯ ಹೊಸ ಹೊಸ ಸ್ವರೂಪಗಳನ್ನು ತಿಳಿದುಕೊಳ್ಳಲು, ನನಗೆ ಸಾಧ್ಯವಾದಾಗಲೆಲ್ಲ ಪ್ರತಿವರ್ಷದ ಚಿತ್ರಸಂತೆಯನ್ನು ಬಿಟ್ಟೂ ಬಿಡದೆ ಓಡಾಡಿಕೊಂಡು ಬರುವವಳು ನಾನು. ಈ ಸರ್ತಿಯೂ ಹೋಗಿದ್ದೆ ಆದರೆ ಚಿತ್ರಸಂತೆಯ ರಸ್ತೆಯ ಇಕ್ಕೆಲಗಳ ನೋಟಕ್ಕಾಗಿ ಅಲ್ಲ; ಚಿತ್ರಸಂತೆಯಲ್ಲಿ ನನ್ನ ಮಂಡಲ ಆರ್ಟ್ ಅನ್ನು ಪ್ರದರ್ಶಿಸುವ ಒಬ್ಬ ಕಿರಿಯ ಕಲಾವಿದೆಯಾಗಿ.. :) ಚಿತ್ರಸಂತೆಯನ್ನು ನೋಡುಗರಾಗಿ ಹೋಗುವುದಕ್ಕೂ, ಅಲ್ಲಿನ ಒಂದು ಭಾಗವಾಗಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದು ನನ್ನ 'ರಸ್ತೆಯ ಆ ಕಡೆ ನಿಂತವರ ಅನುಭವದ ಕಥೆಗಳು'! ಅಲ್ಲಿ, ೮ ಗಂಟೆಯ ನಂತರ ಯಾವುದೇ ವಾಹನಗಳ ಓಡಾಟವನ್ನು ನಿಷಿದ್ಧಗೊಳಿಸುವುದರಿಂದ ನಾವು ನಮ್ಮ ನಮ್ಮ ಕಲಾಕೃತಿಗಳನ್ನು ಗಾಡಿಯಲ್ಲಿ ತರುವುದಾದರೆ, ಆದಷ್ಟು ಬೇಗ ಕೊಂಡೊಯ್ದಿಡಬೇಕಾಗುತ್ತದೆ. ಬೆಳಿಗ್ಗೆ ೭.೧೫ ಗೆ ಚಿತ್ರಸಂತೆಯ ರಸ್ತೆಯಲ್ಲಿ ನನ್ನ ಕಲಾಕೃತಿಗಳ ಸೂಟ್ಕೇಸ್ ಹಿಡಿದು ಇಳಿದು ನಿಂತಿದ್ದೆ. ಮೊದಲ ಅನುಭವವಾದ್ದರಿಂದ ಮನಸ್ಸಿನೊಳಗೆ ಪುಕುಪುಕು. ಆದರೂ ಗಣಪತಿ ಅಣ್ಣಯ್ಯ, ವಿಜಯಶ್ರೀ ಅಕ್ಕ, ಪ್ರಹ್ಲಾದಣ್ಣ ಎಲ್ಲರೂ ತಮ್ಮ ಪ್ರತಿಸಲದ ಅನುಭವಗಳನ್ನು ಈ ಮುಂಚೆ ನನ್ನೊಡನೆ ಹಂಚಿಕೊಂಡಿದ್ದರಿಂದ, ನಾನು ಮಾನಸಿಕವಾಗಿ ಪ್ರತಿಯೊಂದಕ್ಕೂ ಸಿದ್ಧವ...