ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶೈಕ್ಷಣಿಕ ಪ್ರವಾಸಗಳ ಮಹತ್ವ

ಇಮೇಜ್
ಡಿಸೆಂಬರ್ ತಿಂಗಳೆಂದರೆ ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠದ ಒತ್ತಡವಿಲ್ಲದೇ, ಆಟೋಟ ಸಮಾರಂಭಗಳು, ಶಾಲಾ ವಾರ್ಷಿಕೋತ್ಸವ ಇನ್ನಿತರ ಚಟುವಟಿಕೆಗಳು ನಡೆಯುವ ಕಾಲ. ಇದಕ್ಕೆ ಜೊತೆಯೆಂಬಂತೆ ಮಕ್ಕಳಿಗೆ ಇನ್ನೂ ಹುರುಪಿನ ವಿಚಾರವೆಂದರೆ ಸ್ಕೂಲ್ ಟ್ರಿಪ್, ಶೈಕ್ಷಣಿಕ ಪ್ರವಾಸ..!! ವಾರಕ್ಕೂ ಮುಂಚಿನಿಂದಲೇ ಮಕ್ಕಳಲ್ಲಿ ಸಡಗರ,  ಉತ್ಸಾಹ, ತಯಾರಿ ಎಲ್ಲಾ ಪ್ರಾರಂಭ! ಶೈಕ್ಷಣಿಕ ಪ್ರವಾಸದ ಮಹತ್ವ :                   ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಒಂದು ಪ್ರಮುಖವಾದ ಭಾಗವೆಂದೇ ಹೇಳಬಹುದು. ತಮ್ಮ ಸ್ವಂತ ಅನುಭವದ ಮೇಲೆ, ವೀಕ್ಷಣೆಯ ಮೇರೆಗೆ ಮಕ್ಕಳಿಗೆ ಕಲಿಯುವ ಒಂದು ಅವಕಾಶ. ಕೇವಲ ಪುಸ್ತಕದ ಬದನೇಕಾಯಿ ಆಗದೆ, ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಮಾಡಬಹುದಾದಂತಹ ಒಂದು ಉತ್ತಮ ಪ್ರಯತ್ನವೇ ಶೈಕ್ಷಣಿಕ ಪ್ರವಾಸಗಳ ಕೈಗೊಳ್ಳುವಿಕೆ. ಶೈಕ್ಷಣಿಕ ಪ್ರವಾಸದ ಯೋಜನೆಯಿಂದ ಮಕ್ಕಳಲ್ಲಿ ಇತಿಹಾಸ, ವಾಸ್ತುಶಿಲ್ಪ, ಅಭಿವೃದ್ಧಿ, ಉದ್ಯಮ, ಜನ, ಧರ್ಮ, ಸಂಸ್ಕೃತಿ, ಹಾಡು, ನೃತ್ಯ ಹವಾಮಾನ, ನಿಸರ್ಗ, ಪ್ರಾಣಿ ಪಕ್ಷಿ ಸಂಕುಲ ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ...

ನನ್ನ ಬಂಗಾರಿ...

ಒಂದು ದಿನ ಚೀನಿಕಾಯಿ ಪದಾರ್ಥ ಮಾಡಿದ ನಂತರ, ಅದರ ಅಳಿದುಳಿದ ಬೀಜಗಳು ನನ್ನ ಕ್ರಾಫ್ಟ್ ಕೆಲಸಗಳಿಗೆ ಬರುತ್ವೇ ಎಂದು ತೊಳೆದು ಬಾಲ್ಕನಿಯಲ್ಲಿ ಬಿಸಲಿಗೆ ಒಣಗಿಸಿಟ್ಟಿದ್ದೆ. ಸಂಜೆಯ ವೇಳೆಗೆ ವಾಪಸು ತೆಗೆಯಬೇಕೆಂದು ನೋಡಿದರೆ ನನಗೆ ಆಶ್ಚರ್ಯವೊಂದು ಕಾದಿತ್ತು. ಚೀನೀ ಬೀಜದ ಕೇವಲ ಹೊರಗಿನ ಸಿಪ್ಪೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಅದರೊಳಗಿನ ಮೃದು ಭಾಗವು ಲವಲೇಶವಿಲ್ಲದಂತೆ ಖಾಲಿಯಾಗಿತ್ತು. ಇದು ಮತ್ತೆ ಹೋದ ವಾರವಷ್ಟೇ ಕಷ್ಟ ಪಟ್ಟು ಹೋಗಲಾಡಿಸಿದ ಇರುವೆಯ ಕಾಟವೇ ಹೌದು ಎಂದು ಮನಸಾರೆ ಬೈದುಕೊಳ್ಳುತ್ತಾ ಕುರುಹು ಸಿಗಬಹುದೇ ಎಂದು ಬಗ್ಗಿ ನೋಡಿದೆ, ಏನೂ ಗೋಚರಿಸಲಿಲ್ಲ. ಎಲ್ಲಾ ಇರುವೆಗಳೂ ಚೆನ್ನಾಗಿ ತಿಂದು ಹೋಗಿವೆ ಎಂದುಕೊಳ್ಳುತ್ತಾ ಒಳನೆಡೆದೆ. ಮತ್ತೆ ಮರುದಿವಸ ಇನ್ನರ್ಧ ಚೀನೀಕಾಯಿಯ ಬೀಜಗಳನ್ನು ಒಣಗಿಸಿಟ್ಟೆ. ಈ ಸರ್ತಿ ಒಂದು ಕರ್ಪೂರವನ್ನು ಬೀಜಗಳ ಜೊತೆಗಿಟ್ಟು. ಇರುವೆಯಿಂದ ಕಾಪಾಡಿಕೊಳ್ಳುವ ಮಾಸ್ಟರ್ ಪ್ಲಾನ್  ಹಾಕಿದೆ. ಆದರೆ ಮಧ್ಯಾಹ್ನದ ವೇಳೆಗೆ, ಬೀಜ ಒಣಗಿಸಿಟ್ಟ ತಟ್ಟೆಯ ಬಳಿ ಸಣ-ಮಣ ಶಬ್ಧ ಕೇಳಿ ಬರುತ್ತಿತ್ತು. ನಿಧಾನವಾಗಿ ಬಾಲ್ಕನಿಯ ಕರ್ಟೈನ್ ಸರಿಸಿ ಗಮನಿಸಿದೆ. ಮತ್ತೆ ಅಲ್ಲಲ್ಲಿ ಹರಡಿದ ಸಿಪ್ಪೆಗಳು.. ಈ ಸರ್ತಿ ಸಾಕ್ಷಿ ಸಮೇತವಾಗಿ ದೊರಕಿತು,ಇದು ಯಾರ ಹರ್ಕತ್ ಎಂದು..ಪುಟ್ಟದೊಂದು ಮುದ್ದಾದ ಅಳಿಲು ಕುಳಿತ ಭಂಗಿಯಲ್ಲಿ, ತನ್ನೆರಡು ಮುಂಗಾಲು (ಕೈ) ಬಳಸಿ ಚೀನೀ ಬೀಜವನ್ನು ಕಡಿದು ಸಿಪ್ಪೆ ತೆಗೆದು ಒ...

ಮಾತಾಡ್ ಮಾತಾಡ್ ಮಲ್ಲಿಗೆ..

ಇಮೇಜ್
ಇವತ್ತಿಗೆ ನನ್ನ ಪಾಪು ನನ್ನನ್ನು 'ಅಮ್ಮಾ' ಎಂದು ಪೂರ್ತಿಯಾಗಿ ಕರೆದು ೩ ವರ್ಷಗಳಾದವು. ಎಷ್ಟೊಂದು ಸಂತೋಷದ ಕ್ಷಣ! ನಿಜ ಹೇಳಬೇಕೆಂದರೆ ಅಂದು ನನ್ನಲ್ಲಿ ಸಂತೋಷ, ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ಉದ್ಭವವಾಗಿತ್ತು. ಈ ಪಾಪುಗೆ ಹೇಗೆ ತಿಳಿಯಿತು ನನ್ನನ್ನು 'ಅಮ್ಮಾ' ಎಂದೇ ಸಂಭೋದಿಸಬೇಕೆಂದು. ಈ ಪ್ರಶ್ನೆ ಅಸಮಂಜಸ ಎನಿಸಬಹುದು ಆದರೂ ನನಗೆ ಸಂಶಯ ಕಾಡಿದ್ದೆಂತೂ ನಿಜ.. ಇನ್ನೊಂದು ಬಗೆಯಲ್ಲಿ ಹೇಳುತ್ತೇನೆ. ಇಂಗ್ಲೀಷ್ ಮಾತೃಭಾಷೆಯಾಗಿರುವಂತಹ ಮನೆಗಳಲ್ಲಿ,ಮಗುವು ತಾಯಿಗೆ 'Mommy', 'Mamma' ಎಂದೇ ಕರೆಯಲು ಪ್ರಾರಂಭಿಸುತ್ತದೆ.. ಮಗುವಿಗೆ ಹೇಗೆ ತಿಳಿಯಿತು ತಾನು English  ಭಾಷೆಯಲ್ಲಿ ಮಾತನಾಡಬೇಕೆಂದು? ವಿಷಯವಿಷ್ಟೇ, ಮಗುವು ಕಲಿಯುವುದು ಕೇವಲ ಅನುಕರಣೆಯಿಂದ, ಸಹಜವಾಗಿ ಮತ್ತು ತಮಗರಿವಿಲ್ಲದೆ... ಯಾವುದೇ ಹುಟ್ಟಿದ ಶಿಶು, ಈ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೆ (ಸುಮಾರು ೬೫೦೦ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ) ಅವಶ್ಯಕತೆ ಇರುವ ೧೫೦ ಕ್ಕೂ  ಹೆಚ್ಚಿನ ಧ್ವನಿಗಳನ್ನು ಗ್ರಹಿಸುವ ಮತ್ತು ತಮ್ಮ ಬಾಯಿಯಿಂದ ಹೊರಡಿಸುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ವಿಷಯವನ್ನು ನಾನು ಓದಿದಾಗ ಇದು ನಮ್ಮ ಕಲ್ಪನೆಗೂ ಮೀರಿದ್ದು ಎಂದೆನಿಸಿತು. ಈಗ ಭಾಷೆ, ಶಬ್ದ, ವಾಕ್ಯ, ವ್ಯಾಕರಣ ಎಲ್ಲವನ್ನೂ ಕಲಿತಿರುವ ನಮ್ಮಿಂದ ಅಷ್ಟೊಂದು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಈಗಾಗಲೇ ಪಳಗಿ ಹ...

ಭೂಮಿ ಹುಣ್ಣಿಮೆ

ಇಮೇಜ್
ಭೂಮಿ ಹುಣ್ಣಿಮೆ ಒಂದು ಅಪರೂಪದಲ್ಲಿ ಅಪರೂಪದ ಹಬ್ಬ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಭೂಮಿ ತಾಯಿಗೆ ಸಲ್ಲಿಸುವ ಪೂಜಾ ಕ್ರಮ. 'ಸೀಗೆ ಹುಣ್ಣಿಮೆ' ಎಂತಲೂ ಕರೆಯಲ್ಪಡುವ ಈ ಹಬ್ಬದಲ್ಲಿ, ಭೂಮಿಯನ್ನು ದೇವತೆ ಎಂದೇ ಭಾವಿಸಿ ಕೃಷಿಕರೆಲ್ಲ ವರ್ಷಪೂರ್ತಿ ತಮಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ತಮ್ಮ ನೆಲಕ್ಕೆ ವರ್ಷಕ್ಕೂಮ್ಮೆ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಾಗಿದೆ. ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ. ಭೂಮಿ ಹುಣ್ಣಿಮೆ ಹಬ್ಬದಂದು, ತೋಟ ಗದ್ದೆಗಳಲ್ಲಿ ಪೂಜೆಗೆ ಸೂಕ್ತವಾದ ಜಾಗವೊಂದನ್ನು  ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಆ ಜಾಗವನ್ನು ಸ್ವಚ್ಛಗೊಳಿಸಿ, ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿ ಹಸನು ಮಾಡಿಕೊಳ್ಳುತ್ತಾರೆ. ಮರುದಿನ ಮುಂಜಾವಿನಲ್ಲೇ ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ. ಮನೆಯ ಮಂದಿಯೆಲ್ಲ ಸೇರಿ ಪೂಜೆಗೆ ಪಾಲ್ಗೊಳ್ಳಲು ಅನುವಾಗುವಂತೆ ಬಾಳೆ ಎಲೆಗಳನ್ನು ತೋಟದಲ್ಲಿ ಹಾಸಿ ಕುಳಿತುಕೊಳ್ಳಲು ಅಣಿಮಾಡಲಾಗುತ್ತದೆ. ಪೂಜೆ, ಮಂಗಳಾರತಿ, ಬಾಗಿನ ಸಮರ್ಪಣೆ ಮತ್ತು ಹಬ್ಬದಡುಗೆಯ ನೈವೇದ್ಯ ಮಾಡಲಾಗುತ್ತದೆ. ಅದರಲ್ಲೂ ಚೀನಿಕಾಯಿ 'ಕಡುಬು', ಸಾಂಬಾರ ...

ಅನ್ನದ ಋಣ

ನನ್ನ ೩ ವರ್ಷದ ಮಗಳು ಊಟ ತಿಂಡಿ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಚೂಸಿ. ಶಾಲೆಗೆ ಏನು ತೆಗೆದುಕೊಂಡು ಹೋಗುತ್ತೇನೆ, ರೂಟ್ಟಿಗೆ ನೆಂಚಿಕೊಳ್ಳುವುದಕ್ಕೆ ಏನು ಬೇಕು ಎಂಬುದರ ಬಗ್ಗೆ ನಾನು ಕೇಳುವ ಮೊದಲೇ ತಾನು ತೀರ್ಮಾನ ತೆಗೆದುಕೊಂಡಾಗಿರುತ್ತದೆ. ಸೂಪರ್ ಮಾರ್ಕೆಟಿಗೆ ಹೋದಾಗ ತನಗೆ ಇಷ್ಟವಾಗುವ ವಸ್ತು ಮತ್ತು ತಿಂಡಿಗಳನ್ನು ನಮಗಿಂತ ಮುಂಚೆಯೇ ಆಯ್ಕೆ ಮಾಡಿಟ್ಟಿರುತ್ತಾಳೆ. "ಅಮ್ಮ, ಇವತ್ತು ಮಿಕ್ಕಿ ಮೌಸ್ ದೋಸೆ ಮಾಡ್ಕೋಡ್ತ್ಯ?","ನಂಗೆ ಸ್ಕ್ವೇರ್ ಶೇಪ್, ಆರೆಂಜ್ ಕಲರ್ ಚಪಾತಿ ಮಾಡಿ ಕೊಡು", "ವೆಜಿಟಬಲ್ ಬೋಂಡಾ ನಂಗಿಷ್ಟ", "ಹಣ್ಣಿನ ಜೊತೆ ಐಸ್ ಕ್ರೀಮ್ ಕೊಡ್ತ್ಯ?", "ಇವತ್ತು ಮೊಸರು ಜೊತೆ ಸಕ್ರೆ ಬೇಡ ಉಪ್ಪು ಹಾಕಿಕೊಡು" ಹೀಗೆ ಸಾಗಿರುತ್ತದೆ ನನ್ನ ಮಗಳ  ಬಾಯಿ ರುಚಿಗೆ ತಕ್ಕಂತೆ ಇಡುವ ಬೇಡಿಕೆಗಳು. ಬಹುಶಃ ನನ್ನ ಹಾಗೆ ಅನೇಕ ತಾಯಂದಿರಿಗೆ ಇದರ ಅನುಭವವಿದ್ದಿರುತ್ತದೆ. ಒಂದು ದಿನ ಆಹಾರ ಪದಾರ್ಥದ ಸ್ವಚ್ಛತೆಯ ಬಗ್ಗೆ ಏನೋ ಬರೆಯುವ ಪ್ರಯತ್ನದಲ್ಲಿದ್ದೆ. ಮನಸ್ಸು ಹಾಗೆಯೇ ಹಿಂದಕ್ಕೆಳೆಯಿತು. ನಿಜ! ಈಗಿನ ಮಕ್ಕಳಿಗೆ ಯಾವುದು ಪೌಷ್ಟಿಕ ಆಹಾರ, ಯಾವುದು ಹಿತ, ಯಾವುದು ಮಿತ ಎಂದು ಅಳೆದು ಸುರಿದು, ರುಚಿ-ಶುಚಿ ಗಮನಿಸಿ, ನೋಡಲು ಆಸಕ್ತಿ ಬರುವಂತೆಯೂ ಮಾಡಿ ಮಕ್ಕಳು ಚೆನ್ನಾಗಿ ತಿನ್ನುವಂತೆ ಮಾಡಬೇಕಾದ ಸಾಹಸ ಒಂದೆರಡಲ್ಲ. ಅಷ್ಟು ಮಾಡಿದರೂ ಕಡೆಗೆ ಊಟ ತಿಂಡಿ ಮಾಡಿಸಲ...

ಮಳೆಗಾಲಕ್ಕೆ ನಮ್ಮ ಮಕ್ಕಳು ರೇಡಿಯೇ?

ಇಮೇಜ್
ಮಳೆಗಾಲವೆಂದರೆ ತುಂತುರು ಹನಿ, ಮಣ್ಣಿನ ಆಹ್ಲಾದಕರ ವಾಸನೆ, ತಣ್ಣನೆಯ ಗಾಳಿ, ನೋಡಲು ಸುಂದರವಾಗಿ ಕಾಣುವ ತುಂಬಿಕೊಂಡ  ಕೆರೆ-ಕೊಂಡಿಗಳು, ಎಲ್ಲೆಲ್ಲೂ ಹಸಿರು, ಮಳೆಗೆ ಮೈ ಒಡ್ಡಿ ಆಡುವ ಆಟ, ನೀರು ಎರಚಾಟ, ಮಕ್ಕಳಿಗೆ ಪೇಪರ್ ದೋಣಿ ಮಾಡಿ ನೀರಿಗೆ ಬಿಡುವ ಮಜಾ, ಹೊರಗೆ ಮಳೆ ನೀರಿನ ತಟ ಪಟ ಸದ್ದು, ಒಳಗೆ ಬಿಸಿ ಬಿಸಿ ಬಜ್ಜಿ ಮತ್ತು ಕಾಫಿ...ಹೀಗೆ ಮುಂದುರೆಯುತ್ತದೆ ಮಳೆಗಾಲದ ಸಂತಸದ ಕ್ಷಣಗಳ ಪಟ್ಟಿ.. ಅಂತೆಯೇ, ಮಳೆಗಾಲವೆಂದರೆ, ಒಳಗೆ ಎತ್ತಿಟ್ಟಿದ್ದ ಛತ್ರಿ, ರೈನ್ ಕೋಟ್ ಎಲ್ಲ ಹೊರತೆಗೆಯುವ ಸಮಯ, ಒಣಗದ ಬಟ್ಟೆಗಳು, ತಣ್ಣನೆಯ ನೆಲ, ಬೆಂಡಾದ ಬಾಗಿಲುಗಳು, ಹೆಚ್ಚಾದ ಸೊಳ್ಳೆ ಕೀಟಗಳು, ಹಸಿ ಅಂಶದ ಬೂಸ್ಟ್ ಶೇಖರಗೊಂಡ ಗೋಡೆ ಮತ್ತು ಹಾಸಿಗೆಗಳು, ಕೊರೆಯುವ ಚಳಿ, ಮನೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಮಲಗಲು ಅಣಿಯಾಗುವ ಕೆಮ್ಮು ನೆಗಡಿ ಜ್ವರ! ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮಳೆಗಾಲ ಸಮೀಪಿಸಿತೆಂದರೆ ಆಟದ ಜೊತೆಗೆ ಅನಾರೋಗ್ಯದ ಪರದಾಟ!  ಮಳೆಗಾಲದಲ್ಲಿ ಅನಾರೋಗ್ಯ - ಪ್ರಚೋದನಾ ಅಂಶಗಳು :  ಮಳೆಗಾಲ ಶುರುವಾಯಿತೆಂದರೆ ಸಹಜವಾಗಿಯೇ, ವಾತಾವರಣದಲ್ಲಿ ತಾಪಮಾನದ ವ್ಯತ್ಯಾಸ ಉಂಟಾಗುತ್ತದೆ, ಶುಷ್ಕತೆ ಕಡಿಮೆಯಾಗಿ ಎಲ್ಲೆಡೆ ತೇವಾಂಶ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ, ಮಳೆಗಾಲದ ತಂಪಾದ...

ಒಂದು ಚಾಕೊಲೇಟಿನ ಮಹಿಮೆ

ಈ ವರ್ಷದ ಗಣರಾಜ್ಯೋತ್ಸವದ ದಿನದಂದು ನಾನು ಹೈದರಾಬಾದಿನಲ್ಲಿ ನನ್ನ ಅಕ್ಕನ ಮನೆಯಲ್ಲಿದ್ದೆ. ಅವರು ವಾಸವಿರುವ ಟವ್ನ್ ಶಿಪ್ ನಲ್ಲಿ ವಿಜ್ರಂಬಣೆಯ ಗಣರಾಜ್ಯೋತ್ಸವ ಆಚರಣೆ ನಡೆಸಿದ್ದರು. ಆ ಸಮಯದಲ್ಲಿ ನನ್ನ ಪೋಷಕರು,ನಾನು, ನನ್ನ  ಮಗಳು ಸಾನ್ವಿ ಎಲ್ಲರೊಡಗೂಡಿ ಧ್ವಜ ಆರೋಹಣಕ್ಕೆ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟೆವು. ಅಕ್ಕನ ಮಕ್ಕಳು ಮತ್ತು ನನ್ನ ಮಗಳಷ್ಟು ಚಿಕ್ಕ ವಯಸ್ಸಿನವರಿಗೆ ರಾಜ್ಯೋತ್ಸವದ ಬಗ್ಗೆ ಏನು ಕಲ್ಪನೆ ಇರಲು ಸಾಧ್ಯ? ಅವರಿಗೆ ಗೊತ್ತಿದ್ದದ್ದು ಒಂದೇ..ಧ್ವಜಾರೋಹಣದ ನಂತರ ಸ್ವೀಟು ಕೊಡ್ತಾರಂತೆ!! ಅಲ್ಲಿವರೆಗೆ ಸುಮ್ನೆ ಕೂತಿರಬೇಕು ಅಷ್ಟೇ ಅವರ ಮನಸ್ಸಿಗೆ ಹೊಕ್ಕ ವಿಷ್ಯ. ಯಥಾ ಪ್ರಕಾರ ಆಚರಣೆಯು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕೊನೆಗೊಂಡಿತು. ಒಳ್ಳೆ ಪೊಟ್ಟಣದಲ್ಲಿ, ಎರಡು ಅಂಬೊಡೆ ಚಟ್ನಿ, ಜಾಮೂನು ಕೊಟ್ಟಿದ್ದರಿಂದ ಎಲ್ಲರೂ ಬಾಯಲ್ಲಿ ನೀರೂರಿಸಿಕೊಂಡು ಸವಿಯುತ್ತಿದ್ದರು. ನಾವೂ ಕೂಡ ತಲಾ ಒಂದೊಂದು ಪೊಟ್ಟಣವನ್ನು ಕೈಗೆರಿಸಿಕೊಂಡೆವು. ನನ್ನ ಮಗಳು ತನ್ನ ಅಜ್ಜನ ಜೊತೆಗೂಡಿ ಇನ್ನೇನು ಸಿಹಿ ಸವಿಯಬೇಕೆನ್ನುತ್ತಿರುವಾಗಲೇ ಅಲ್ಲೊಬ್ಬ ಪುಟ್ಟ ಹುಡುಗನೊಬ್ಬ ಅವರ ಬಳಿಗೆ ಹೋಗಿ ಚಾಕೊಲೇಟ್ ಒಂದನ್ನು ಸಾನ್ವಿಯ ಕೈಗಿತ್ತು ಇಂದು ತನ್ನ ಹ್ಯಾಪಿ ಬರ್ತಡೆ ಎಂದು ತನ್ನ ಸಂಭ್ರಮವನ್ನು ಹಂಚಿಕೊಂಡ. ಚಾಕೊಲೇಟ್ ಸಿಕ್ಕಿದ್ದೇ ತಡ, ಅವಳ ಕೈಯಲ್ಲಿದ್ದ ಜಾಮೂನು ವಾಪಸು ಅಜ್ಜನ ಕೈಗೆ ಬಂದು ಬಿಟ್ಟಿತು. ಆ ವರೆಗೆ ಕ...