ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಕ್ಕಳ ಕಾರ್ಯಕ್ರಮ

ಇಮೇಜ್
ಮಗಳ ಶಾಲೆಯಲ್ಲಿ ಇವತ್ತು 'ಸ್ಪೋರ್ಟ್ಸ್ ಡೇ'. ಹೆಚ್ಚಿನ ಮಕ್ಕಳಿರುವ ಶಾಲೆಯಾದ್ದರಿಂದ ಇಂದು ಕೇವಲ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೋಸ್ಕರ ಮಾತ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದೇ ಮಾದರಿಯ ಯುನಿಫಾರ್ಮ್ಪು ಧರಿಸಿ ಕಂಗೊಳಿಸುತ್ತಿದ್ದ ಪುಟ್ಟ ಪುಟ್ಟ ಮುದ್ದು ಮುದ್ದು ಮಕ್ಕಳು, ಅವರುಗಳನ್ನೆಲ್ಲ ಶಿಸ್ತಿನಲ್ಲಿ ನಿಲ್ಲಿಸಲು ಶ್ರಮಿಸಿ ಕಡೆಗೂ ಯಶಸ್ವಿಗೊಂಡಿದ್ದ ಟೀಚೆರ್ರುಗಳು, ತಮ್ಮ ತಮ್ಮ ಮಕ್ಕಳ ಕವಾಯಿತು-ಆಟ-ಸ್ಪರ್ಧೆ ಎಲ್ಲವನ್ನೂ ನೋಡಿ ಸಂಭ್ರಮಿಸಲು ಕಣ್ಣು, ಕಣ್ಣಿಗಿಂತ ಹೆಚ್ಚಾಗಿ ಫೋಟೋಗೋಸ್ಕರ ಮೊಬೈಲ್ ಮತ್ತು ಕ್ಯಾಮೆರಾ ಎಲ್ಲವನ್ನೂ ರೆಡೀ ಹಿಡಿದು ನಿಂತ ನಮ್ಮಂತಹ ಪಾಲಕರು, ಮುಖ್ಯ ಅತಿಥಿಗಳಿಗೋಸ್ಕರ ಸಿಂಗಾರಗೊಂಡಿದ್ದ ವೇದಿಕೆ ಎಂಬಲ್ಲಿಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸ್ಪೋರ್ಟ್ಸ್ ಡೇ ಕಾರ್ಯಕ್ರಮದ ಪ್ರಾರಂಭವಾಯಿತು. ಬಣ್ಣ ಬಣ್ಣದ ಟೇಪನ್ನು ಹಿಡಿದುಕೊಂಡ ನಮ್ಮ ನಮ್ಮ ಮಕ್ಕಳು ನೀಡಿದ ವಿನೋದಾವಳಿ ನಾವು ಪಾಲಕರೆಲ್ಲ ಬೀಗುವಂತೆ ಮಾಡಿತು. ಅಷ್ಟು ಚಿಕ್ಕ ಚಿಕ್ಕ ಮಕ್ಕಳ ಹಿಡಿದು, ಅವರಿಗೆ ಬಗೆ ಬಗೆಯ ತರಬೇತಿ ನೀಡಿ, ಕವಾಯಿತು ಮಾಡಿಸುವಲ್ಲಿನ ಶಿಕ್ಷಕರ ಪ್ರಯತ್ನ ಖಂಡಿತವಾಗಿಯೂ ಮೆಚ್ಚುವಂತದ್ದೇ. ನಂತರದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಏರ್ಪಡಿಸಿದ್ದ ಒಂದಷ್ಟು ಆಟೋಟ ಸ್ಪರ್ಧೆಗಳು ನೆರೆದಿದ್ದ ಸಭಿಕರನ್ನೆಲ್ಲ ಅತೀವವಾಗಿ ರಂಜಿಸಿತು. ಖುಷಿ, ಉತ್ಸಾಹ, ಮಕ್ಕಳನ್ನು ಪ್ರೋತ್ಸಾಹ...

ಕುಂದಾದ್ರಿ ಬೆಟ್ಟ ಹತ್ತಿದ್ರೇನ್ರೀ??

ಇಮೇಜ್
ಸಮುದ್ರ ಮಟ್ಟಕ್ಕಿಂತ ೨೭೧೦ ಫೀಟ್ ಎತ್ತರದ ಬೆಟ್ಟವೊಂದರ ತುದಿಯಲ್ಲಿ ನೀವು ನಿಂತಿದ್ದೀರಿ. ನಿಮ್ಮೆದುರು 270 ಡಿಗ್ರಿ ಕೋನದಷ್ಟು ವಿಸ್ತಾರವಾಗಿ ಕಾಣಸಿಗುತ್ತಿರುವ ಪ್ರಕೃತಿಯ ವಿಹಂಗಮ ನೋಟ. ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವುದು ಹಾಸು ಹೊಕ್ಕಾಗಿರುವ ಹಸಿರು. ಕೆಳಗೆ ನೋಡಿದರೆ ಈ ಭುವಿಯೇ ಸ್ವರ್ಗ  ಎಂದೆನಿಸುವಂತೆ ಅಲ್ಲಲ್ಲಿ ಮಳೆ ಬಿದ್ದು ತುಂಬಿಕೊಂಡ ಕಂದು-ಕೇಸರಿ ಬಣ್ಣದ ನೀರಿನ ಕೋಡಿಗಳು, ಹರಿಯುತ್ತಿರುವ ನೀಲ ನದಿ, ತನ್ನದೇ ಆದ ರೀತಿಯಲ್ಲಿ ರಂಗವಲ್ಲಿ ಹಾಕಿಕೊಂಡ ಗಿಳಿಹಸಿರು ಗದ್ದೆಗಳ ಸಾಲು, ವರ್ಣಮಯ ಊರು-ಕೇರಿ ಹೀಗೆ ಮುಗಿಯದ ನೋಟ...ಹಾಂ! ಈ ನೋಟ ಅರೆಗಳಿಗೆ ಮಾತ್ರ; ಮತ್ತೊಂದು ಕ್ಷಣಕ್ಕೆ, ಬೆಳ್ಳನೆಯ ಹತ್ತಿಯಂತಹ ಮೇಘಗಳ ಹಿಂಡಿಂಡು ಸಾಲುಗಳು ನಮ್ಮನ್ನೂ ಕೂಡ ಆವರಿಸಿ, ಮುಸುಕು ಮುಚ್ಚಿಬಿಡುವ ಇಬ್ಬನಿಯ ಸುಂದರ ದೃಶ್ಯದ ಅನಾವರಣ. ಮಂಜಿನ ತಂಪಿನಿಂದುಂಟಾದ ಚಳಿಯ ಜೊತೆಗೆ, ಆ ಕ್ಷಣಕ್ಕೆ ಅಲ್ಲಿ ನಿಂತು ಕಾಣುತ್ತಿರುವ ಸಹ್ಯಾದ್ರಿಯ ಮಡಿಲ ನೋಡಿ ನವಿರೇಳುತ್ತಾ ಹೋಗುತ್ತದೆ ನಮ್ಮ ಮೈ ಮನ. ಇನ್ನು ಅಲ್ಲಿಂದ ನಿಂತು ನೋಡಲು ಕಾಣಸಿಗುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯದ ವರ್ಣನೆಗೆ ಶಬ್ಧಗಳು ಸಿಗುವುದೇ ಕಷ್ಟ - ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಆ ಚೆಲುವನ್ನು 'ಬಂಗಾರವೇ' ಸರಿ, ಎಂದು ಸುಮ್ಮನೆ ಕಣ್ತುಂಬ ಹೀರಿಕೊಂಡು ಮೌನಕ್ಕೆ ಶರಣಾಗುವುದ...

ಬತುಕಮ್ಮ ಹಬ್ಬ

ಇಮೇಜ್
ಬಿರು ಬಿಸಿಲಿನ ಊರು ಹೈದರಾಬಾದ್ ನ ನಂಟು ನನಗೆ ಪ್ರಾರಂಭವಾದ್ದು ೫ ವರ್ಷಗಳ ಹಿಂದೆ. ಅಕ್ಕ ನ ಕುಟುಂಬ ಹೈದರಾಬಾದಿನಲ್ಲಿ ವಾಸಿಸಲಾರಂಭಿಸಿದಾಗಿನಿಂದ, ವರ್ಷಕ್ಕೊಂದು ಸರ್ತಿಯಾದರೂ ರಜೆಗೆಂದು ಅಲ್ಲಿಗೆ ತೆರಳುವುದು ಸಾಮಾನ್ಯವಾಗಿದೆ ನನಗೆ. ಪ್ರತಿ ಸಲವೂ ಮಕ್ಕಳನ್ನು ಕಟ್ಟಿಕೊಂಡು ಸಿಕ್ಕ ಸಿಕ್ಕ ಸಂದರ್ಭ, ಸಿಕ್ಕ ಸಿಕ್ಕ ಸಮಯವನ್ನು ಹೈದರಾಬಾದ್ ಓಡಾಡಲು ಬಳಸಿಕೊಳ್ಳುತ್ತಿದ್ದೆವು. ಅಂತೆಯೇ ಈ ಸರ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಪ್ರಯಾಣ ಬಳಸಿದೆನಾದ್ದರಿಂದ, ಅಲ್ಲಿನ ಅತ್ಯಂತ ಸಡಗರದ ಮತ್ತು ಸ್ಥಳೀಯ ಹಬ್ಬವೊಂದರ ಪರಿಚಯ ನನಗಾಯಿತು. ಅದುವೇ, ಬತುಕಮ್ಮ ಹಬ್ಬ. ಬತುಕಮ್ಮ ಹಬ್ಬ ತೆಲಂಗಣಿಗರ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ನವರಾತ್ರಿ ಹಬ್ಬ. ಹಬ್ಬ ಎನ್ನುವುದಕ್ಕಿಂತಲೂ ಇದೊಂದು ಅಲ್ಲಿನ ಸಂಸ್ಕೃತಿಯ ಸ್ವರೂಪವಾಗಿದೆ. ತೆಲುಗು ಭಾಷೆಯ ಪ್ರಕಾರ, ಬತುಕು ಎಂದರೆ ಜೀವ ಮತ್ತು ಅಮ್ಮ ಎಂದರೆ ತಾಯಿ. ಜನನಿ ಎಂದು ಕರೆಯಲ್ಪಡುವ ಶಕ್ತಿ ದೇವತೆ ಮಹಾ ಗೌರಿಯನ್ನು ನಿಸರ್ಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುವ ಆಚರಣೆ. ಮಹಾಲಯ ಅಮಾವಾಸ್ಯೆ ದಿನದಿಂದ ಪ್ರಾರಂಭವಾಗುವ ಈ ಹಬ್ಬಕ್ಕೆ, ಗೋಪುರದ ಮಾದರಿಯಲ್ಲಿ, ಬಿದಿರಿನ ಕಟ್ಟನ್ನು ನಿರ್ಮಿಸಿಕೊಂಡು ಅದರ ಸುತ್ತಲೂ ಏಳು ಹಂತಗಳಲ್ಲಿ, ಋತುಮಾನಕ್ಕೆ ತಕ್ಕಂತೆ ದೊರೆಯುವ, ಚೆಂಡು ಹೂವು, ಕನ್ನೇ  ಹೂವು, ಆವರಿಕೆ ಗಿಡದ ಹೂಗಳು ಮತ್ತಿತರ ವಿಶ...

ಕ್ವಿಲ್ಲಿಂಗ್ ಎಂಬ ಕೌಶಲ್ಯದ ಗರಿ

ಇಮೇಜ್
ಒಂದಷ್ಟು ವರ್ತುಲ, ಒಂದಷ್ಟು ತ್ರಿಭುಜ, ಮತ್ತೊಂದಷ್ಟು ಚೌಕ, ಆಯತ..ಒಮ್ಮೆ ಒತ್ತೊತ್ತಾಗಿ ಸುತ್ತಿಕೊಳ್ಳುವ ಬಿಗುಮಾನ, ಮತ್ತೊಮ್ಮೆ ಉದುರುದುರಾಗಿ ಅರಳಿಕೊಳ್ಳುವ ಸೌಂದರ್ಯ..ಒಮ್ಮೆ ಒಪ್ಪ ನೇರದ ದಿಟ್ಟೆ, ಮತ್ತೊಮ್ಮೆ ನಸು ನಾಚುವ ಓರೇ..ಬಳುಕಿನ ಬಳ್ಳಿಯಾಗಿ, ಮಿನುಗುವ ನಕ್ಷತ್ರವಾಗಿ, ಪ್ರೀತಿ ಹುಟ್ಟಿಸುವಂತಹ ಹೃದಯವಾಗಿ..ಹೀಗೆ ಸಾಗುತ್ತದೆ, ಕಾಗದವರಳಿ ಹೂವಾಗುವ ಕಥೆ.. ಬಣ್ಣ ಬಣ್ಣದ ತೆಳ್ಳನೆಯ ಪೇಪರ್ರಿನ ಪಟ್ಟಿಗಳು, ಸರ ಸರನೆ ಆಡಿಕೊಂಡು ಸುರುಳಿಯಾಗಿ ಸುತ್ತಿಕೊಂಡು, ನಮ್ಮ ಕೈಬೆರಳುಗಳ ಹಿತಸ್ಪರ್ಶಕ್ಕೊಳಗಾಗಿ ಮೆದುವಾಗಿ ಒತ್ತಿಸಿಕೊಂಡು, ವೈಯಾರದ ಆಕೃತಿಯನ್ನು ತಾಳಿ, ಅಂತಿಮವಾಗಿ ಅಂಟಿನೊಡನೆ ತನ್ನನ್ನು ತಾನೇ ಹೊಂದಿಸಿಕೊಂಡು ಕ್ಷಣಮಾತ್ರದಲ್ಲಿ ಸುಂದರ ಕಲಾಕೃತಿಯಾಗಿ ಅರಳಿಕೊಳ್ಳುವ ಒಂದು ಸುಂದರ ಮಾಯೆಯೇ ಕ್ವಿಲ್ಲಿಂಗ್ ಎಂಬ ಚಿತ್ತಾರ. ಈ ಕಲೆಯ ಸೃಷ್ಟಿಯ ಹಿಂದೆಯೂ ಒಂದು ರೋಚಕ ಕಥೆಯಿದೆ.ಇದೊಂದು ಒಟ್ಟಾರೆಯಾಗಿ ಹುಟ್ಟಿದ ಕುಶಲ ಕಲೆ. ಫ್ರಾನ್ಸ್ ಮತ್ತು ಇಟಲಿಯಲ್ಲಿ ಮೊಟ್ಟ ಮೊದಲು ಪ್ರಾರಂಭವಾದ ಕ್ವಿಲ್ಲಿಂಗ್ ಅಲ್ಲಿನ ಸನ್ಯಾಸಿನಿಯರು ತಾವು ಪುಸ್ತಕದ ಮೇಲ್ಪದರವನ್ನು ಮಡಚಿ ಹಾಕುವಾಗ, ಹೆಚ್ಚಾಗಿ ಉಳಿದು ಹರಿದ ನಿರುಪಯುಕ್ತ ಉದ್ದದ ಕಾಗದಗಳನ್ನು ಸುಮ್ಮನೆ ಸುರುಳಿಯಾಗಿಸಿ ಮಡಚಲಾರಂಭಿಸದರಂತೆ. ಅದರಿಂದ ದೊರೆತ ವಿನೂತನ ಸ್ವರೂಪದಿಂದ ಆಕರ್ಷಿತರಾಗಿ, ತಮ್ಮ ಗ್ರಂಥ ಪುಸ್ತಕಗಳ ಮೇಲಪುಟಗಳಿಗೆ ಅಲಂಕರಿಸಿ ಸಂಭ್ರಮಿಸಿದರಂತೆ. ಜೊತೆಗೆ ಇನ್ನಷ್ಟ...

ನಿಮ್ಮ ಮಗು ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲವೇ?

ಇಮೇಜ್
"ನಮ್ ಹುಡ್ಗ ಏನೂ ಸರಿ ಊಟನೇ ಮಾಡಲ್ಲ ಕಣ್ರೀ", "ತುಂಬಾ ಹಠ ನಂ ಮಗಳದ್ದು ಊಟ ತಿಂಡಿಗೆ,  ಅರ್ಧಕ್ಕರ್ಧ ಚೆಲ್ಲಿ ರಂಪಾಟ ಮಾಡ್ತಾಳೆ", "ಕಾರ್ಟೂನ್ ಇಲ್ಲ ಅಂದ್ರೆ ಊಟ ತಿಂಡೀನೇ ಮಾಡಲ್ಲ, ಮಗು ತಿಂದ್ರೆ ಸಾಕು ಅಂತ ಟಿ.ವಿ ಹಾಕ್ಕೊಂಡು, ಹೇಗೋ ಹೊಟ್ಟೆ ತುಂಬಿಸೋದು", "ಮನೆ ಊಟ ಸೇರಲ್ಲ, ಹೊರಗಡೆ ತಿಂಡಿ, ಕ್ಯಾನ್ಡಿ, ಚೊಕೊಲೇಟ್ಸ್ ಎಲ್ಲ, ಎಷ್ಟು ಚೆನ್ನಾಗಿ ತಿನ್ತಾಳೆ"."ಸ್ಕೂಲ್ ಇಂದ ಡಬ್ಬಿ ಹೇಗೆ ಕಳ್ಸಿದೀನೋ ಹಾಗೇ ವಾಪಸ್ ಬರತ್ತೆ", "ನಮ್ಮ ಮಗುವಿನದು, ಶಾಲೆಯಲ್ಲಿ ಡಬ್ಬಿ ಖಾಲಿಯಾಗತ್ತೆ, ಮನೇಲಿ ಊಟ ತಿಂಡಿಗೆ ರಗಳೆ", "ಊಟದ ಜೊತೆ ಚಿಪ್ಸ್ ಏನಾದ್ರು ಕುರುಕಲು ಬೇಕೇ ಬೇಕು ಇವನಿಗೆ, ಇಲ್ಲಾಂದ್ರೆ ಊಟನೇ ಆಗಲ್ಲ", "ಮಗು ಚೆನ್ನಾಗಿ ತಿಂತಾನೇ ಇಲ್ಲ,  ಡಾಕ್ಟರ್  ಕೇಳ್ಬೇಕ್ರಿ  ನಾನು, ತಿನ್ನಕ್ಕೆ ಏನಾದ್ರು ಟಾನಿಕ್ ಕೊಡ್ಸಬೇಕು", "ಹಾಲು ಕಂಡ್ರೆ ಮಾರು ದೂರ ಓಡ್ತಾಳೆ, ಬೈದು ಹೊಡೆದು ಎಲ್ಲಾ ಮುಗೀತು, ಪ್ರಯೋಜನವೇ ಇಲ್ಲ", "ಇತರರ ಮನೆಗಳಿಗೆ ಹೋದ್ರೆ ಮಾತ್ರ ಸ್ವಲ್ಪವೂ ತಕರಾರಿಲ್ಲದೆ ಚೆನ್ನಾಗಿ ತಿಂದು ಬರುತ್ತಾನೇರೀ ನಮ್ಮ ಮಗ, ಮನೇಲಿ ಮಾತ್ರ ಗಲಾಟೆ ಎಲ್ಲಾ ತಿಂಡಿಗಳಿಗೂ", "ಮನೇಲಿ ಯಾವ ತಿಂಡಿ ನೋಡಿದರೂ ಬೋರ್ ಅಂತಾಳೆ ಮಗಳು" ... ಅಬ್ಬಾ! ಇವೆಲ್ಲಾ ಮಕ್ಕಳ ಪೋಷಕರಾಗಿ ನಾವು ನಡೆಸುವ ಅತ್ಯಂತ ಸರ್ವೇ ಸಾಮ...

'ಸಾಗರ' ವೆಂಬ ಮೋಹ

ಇಮೇಜ್
ಎಂದಿನಂತೆ ಇಂದಿನ ದಿನಚರಿ ಪ್ರಾರಂಭವಾಗಿದೆ. ಮುಂಜಾವಿನ 5 ಗಂಟೆಯ ಚುಮು ಚುಮು ಚಳಿ, ಬೆಳಕಾಗುತ್ತಿದ್ದರೂ ಕಾಣದ ಸೂರ್ಯ, ಮಳೆಗಾಲದ ಮೋಡ. ನಮ್ಮ ಊರ ಕಡೆಯಂತಲ್ಲ ಬೆಂಗಳೂರಿನ ಮಳೆ. ಇಲ್ಲಿ ಹೇಗೆಂದರೆ "ದಿಸ್ ಇಸ್ ರೈನಿ ಸೀಸನ್" ಎಂಬ ಹೇಳಿಕೆಗೆ ಆಗೊಮ್ಮೆ ಈಗೊಮ್ಮೆ ಸುರಿವ ಮಳೆ ಮತ್ತದರ ನೆನಪಿಗೆ ಎರಡು ದಿನ ನಿಲ್ಲುವ ನೀರು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗದಿರುವ ವಸ್ತುವಿಲ್ಲ. ಈ ಊರು ಬದುಕನ್ನು ಕಟ್ಟುಕೊಟ್ಟಿದೆ. ಭವಿಷ್ಯ ರೂಪಿಸಿಕೊಡುವ ಕೆಲಸ, ಪುಟ್ಟ ಮನೆ ಮತ್ತು ಸಂಸಾರ, ಮಗಳೆಂಬ ಶಕ್ತಿ, ಓಡಾಡಲು, ತಿನ್ನಲು, ಹಾರಾಡಲು, ವೀಕೆಂಡ್ ಮಸ್ತಿ, ನೆಂಟರಿಷ್ಟರು, ಸ್ನೇಹಿತರು ಎಲ್ಲವೂ, ಎಲ್ಲರೂ ಇದ್ದಾರೆ ನಿಜ. ಇಷ್ಟಾಗ್ಯೂ ಯಾರಾದರೂ ಮಾತಿಗೆ ಸಿಕ್ಕಿ, ಯಾವೂರು ನಿಮ್ಮದು ಎಂದು ಕೇಳಿದಾಗ ಮಾತ್ರ, "ನಮ್ಮೂರು ಸಾಗರ" ಎಂದು ಲೀಲಾಜಾಲವಾಗಿ ಉತ್ತರಿಸಿಯಾಗಿರುತ್ತದೆ ಮನ. ಅಂಥದ್ದೇನಿದೆಯಪ್ಪಾ ಸಾಗರದಲ್ಲಿ ಇಲ್ಲಿ ಬೆಂಗಳೂರಿನಲ್ಲಿಲ್ಲದಿರುವುದು? ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ಪ್ರತಿಯೊಂದು ಪ್ರದೇಶವೂ ವಿಶಿಷ್ಟ ಮತ್ತು ವಿಭಿನ್ನ. ಆದರೂ ತುಲನೆ ಕೇವಲ ಭೌಗೋಳಿಕವಾಗಿ ಅಥವಾ ಭೌತಿಕವಾಗಿ ಅಲ್ಲ. ಈ ಹುಟ್ಟೂರು ಎನ್ನುವ ಮಾಯೆ ಮಾನಸಿಕವಾಗಿ ಮೂಡಿ ಬರುವಂತದ್ದು. ಮಳೆ ಬರುತ್ತಿಲ್ಲವೇ ಬೆಂಗಳೂರಿನಲ್ಲಿ? ಇದೆ. ಆದರೂ, ಅಪ್ಪಟ ಮಲೆನಾಡಿನ ಹಗಲು-ರಾತ್ರಿ ಧೋ ಎಂದು ಎಡೆಬಿಡದೆ ಸುರಿವ ಮಳೆಯ ಸದ್ದಿಗೆ ಮನ ಮುದಗೊಳ್ಳುವುದು ಸ...

ರಜೆ ಎಂದರೆ ಸಮಯದ ಸದುಪಯೋಗ

ಇಮೇಜ್
ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಇನ್ನು ಸಾಕಷ್ಟು ದಿನ ಬೇಸಿಗೆ ರಜೆ, ಮಕ್ಕಳು ಸ್ವಲ್ಪ ರೆಸ್ಟ್ ಮಾಡ್ಲಿ, ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ, ಊಟ ತಿಂಡಿಗೊಂದು ಬಂದರೆ ಸಾಕು ಎಂಬುದು ಸಾಮಾನ್ಯವಾಗಿ ನಾವು ಪೋಷಕರ ಮನಸ್ಸಿನಲ್ಲಿ ಬರುವ ವಿಚಾರ.  ಆದರೆ ಈ ಬೇಸಿಗೆ ರಜೆ ಯ ನಿಜವಾದ ಅರ್ಥವೇನು? ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ವಿಧಾನಗಳೇನು? ನಾವು ಹೇಗೆ ನಮ್ಮ ಮಕ್ಕಳಿಗೆ ರಜೆಯ ಸದುಪಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು ಎಂದುದರ ಕುರಿತು ಇಲ್ಲಿದೆ ಒಂದು ಸಮಗ್ರವಾದ ಟಿಪ್ಪಣಿ. ರಜೆ ಎಂದರೆ ವಿಶ್ರಾಂತಿ ಎಂದರ್ಥವಲ್ಲ. ರಜೆ ಎಂದರೆ ನಮ್ಮ ನಿತ್ಯ ಚಟುವಟಿಕೆಗಳಿಗಿಂತ, ಸ್ಥಿತ ಜೀವನ ಶೈಲಿಗಳಿಂದ ಸ್ವಲ್ಪ ಭಿನ್ನವಾಗಿ, ಮನಸ್ಸಿಗೆ ಖುಷಿಯೆನಿಸಿದ್ದನ್ನು,  ಉಪಯುಕ್ತವಾದ್ದನ್ನು, ಅಪೂರ್ಣವಾಗಿಟ್ಟುಕೊಂಡ ಕಾರ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುವುದು ಎಂದೂ ಅರ್ಥೈಸಬಹುದು. ಒಂದೇ ಮಾತಿನಲ್ಲೇ ಹೇಳುವುದಾದರೆ ರಜೆ ಎಂದರೆ, ಸಿಕ್ಕಿರುವ ಬಿಡುವಿನ ಸಮಯದ ಸದುಪಯೋಗ. ವಾಸ್ತವವಾಗಿ, ರಜೆ ಬಂದರೆ, ಮಕ್ಕಳು ಆ  ವರೆಗೆ ಒಗ್ಗಿಕೊಂಡ ಶಾಲೆ, ಶಿಕ್ಷಣ, ಹೊಂವರ್ಕ್, ಪರೀಕ್ಷಾ ಸಮಯದಲ್ಲಿ ಮಾಡಬೇಕಾಗುವ ಹೆಚ್ಚಿನ ತಯಾರಿ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು, ತಮಗಿಷ್ಟವಾದ್ದನ್ನು ಮಾಡಿಕೊಂಡು, ಸ್ನೇಹಿತರೊಡನೆ ಹೆಚ್ಚಿನ ...

ಉಡುಗೊರೆ ನೀಡುವ ಮುನ್ನ

"ವಸಂತ ಮಾಸ ಬಂದಾಗ ಮಾವು ಚಿಗರಲೇ ಬೇಕು, ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು.... " ಎಂದು ನನಗರಿವಿಲ್ಲದಂತೆಯೇ ಹಾಡು ಗುನುಗುತ್ತಲಿತ್ತು ಕೈಯಲ್ಲಿದ್ಯಾವುದೋ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ.. ಹೌದು! ಈಗೆಲ್ಲ ಮಂಗಳ ಕಾರ್ಯಗಳು ನಡೆಯುವ ಸಕಾಲ... ಆಮಂತ್ರಣ ಪಡೆದ ನಮಗೂ ಅತಿಥಿಗಳಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವುದು, ತುಂಬಾ ಹತ್ತಿರದ ಕೌಟುಂಬಿಕ ಕಾರ್ಯಕ್ರಮಗಳಾಗಿದ್ದರೆ ಮನೆಯವರಾಗಿ ಅವುಗಳ ಸಡಗರ - ಸಂಭ್ರಮಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಇವೆಲ್ಲದರ ಜೊತೆಗೆ, ಕಾರ್ಯಕ್ರಮಗಳಲ್ಲಿ, ಉಡುಗೊರೆ ನೀಡುವುದು ಕೂಡ ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಯಾರ್ಯಾರಿಗೆ, ಯಾವ ಯಾವ ಕಾರ್ಯಕ್ರಮಗಳಿಗೆ, ಎಷ್ಟೆಷ್ಟು ಮೌಲ್ಯದ ಉಡುಗೊರೆ ನೀಡುವುದು,  ಒಟ್ಟಾರೆ  ಏನು ಉಡುಗೊರೆ ಕೊಡುವುದು ಎಂಬುದು ಸಾಮಾನ್ಯವಾಗಿ ನಮಲ್ಲಿ ಉಧ್ಭವವಾಗುವ, ಅನೇಕ ಸಲ ಗೊಂದಲ ಉಂಟುಮಾಡುವ ಪ್ರಶ್ನೆ. ಹೀಗೊಂದು ಚಿಕ್ಕ ಟಿಪ್ಪಣಿ, ಉಪಯುಕ್ತ ಉಡುಗೊರೆಗಳ ಕುರಿತು. ಸಂದರ್ಭ ೧ :  ಲತಾ ಒಂದು ಟೆಲಿಫೋನ್ ಆಫೀಸ್ ನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಯ ಮಗನ ಮದುವೆಗೆ ಕರೆಯೋಲೆ ಸಿಕ್ಕಿದೆ. ಧಾಮ್ ಧೂಮ್ ಮದುವೆಯಂತೆ ಎಂಬ ಸುದ್ದಿ ಗಾಳಿಯಲ್ಲಿದೆ. ಚೆನ್ನಾಗಿ ಸಿಂಗಾರಗೊಂಡು ಹೋಗಬೇಕು, ಮದುವೆಗೆ ಉ...

ಸಿರಿಕಲ್ಚರ್ - ರೇಷ್ಮೆ ಸಾಕಾಣಿಕೆ

ಇಮೇಜ್
ಬೇಸಿಗೆ ರಜೆಗೆ ಸಾಮಾನ್ಯವಾಗಿ ಅಕ್ಕ ಮತ್ತು ನಾನು ಊರ ಕಡೆ ಸಿಕ್ಕೇ ಸಿಗುತ್ತೇವೆ.  ನಮ್ಮ ನಮ್ಮ ಮಕ್ಕಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ರಜೆಯನ್ನು ಕಳೆಯುತ್ತಾರೆ. ಪ್ರತಿ ಸಲವೂ, ಹೊಸತನ್ನು ಹುಡುಕುತ್ತೇವೆ ಸಂಭ್ರಮಿಸಲು, ಕಲಿಯಲು. ಈ ಸರ್ತಿಯ ರಜೆಯಲ್ಲಿ, ಸಂಬಂಧಿಕರೊಬ್ಬರು ಮಾಡಿಕೊಂಡಿರುವ ರೇಷ್ಮೆ ಸಾಕಾಣಿಕೆ ಕೃಷಿಯನ್ನು ನೋಡಲು ಹೋಗಿದ್ದೆವು. ಇದರ ಬಗ್ಗೆ ಕಂಡು, ಕೇಳಿ, ತಿಳಿದುಕೊಂಡ ವಿಷಯಗಳ ಪುಟ್ಟ ಸಾರಾಂಶ. ನಾಗೇಶ ಭಟ್ಟರು, ಹೊಡಬಟ್ಟೆ ಇವರು ಮೂಲತಃ ಕೃಷಿಕರು, ಅಡಿಕೆ, ಬಾಳೆ, ತೆಂಗು, ರಬ್ಬರ್, ಫೈನ್ಯಾಪಲ್ ಹೀಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುತ್ತಿರುವ ಇವರು ಹೊಸತಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಿಬಂದಾಗ, ಸಹಜವಾಗಿಯೇ ಕಿವಿ ನೆಟ್ಟಗಾಯಿತು. ಮಕ್ಕಳೆಂತೂ ಪಿಕ್ನಿಕ್ ಗೆ ಯಾವಾಗಲೂ ತಯಾರು. ಸರಿ, ಒಂದು ಹೊತ್ತಿನ ಭೇಟಿ ನಿರ್ಧರಿಸಿ ಹೊರೆಟೆವು. ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants). ಒಳ್ಳೆಯ ಜಾಗ ಮತ್ತು ನೀರಿನ ವ್ಯವಸ್ಥೆಯಿದ್ದರೆ, ರೇಷ್ಮೆ ಸಾಕಾಣಿಕೆ ಸುಲಭ ಸಾಧ್ಯ ಎಂದೇ ಮಾತು ಶುರುಮಾಡಿದ, ನಾಗೇಶಣ್ಣ, ನಮ್ಮನೆಲ್ಲಾ, ರೇಷ್ಮೆ ಸಾಕಾಣಿಕಾ ಮನೆಗೆ ಕರೆದೊಯ್ದರು. ಹೆಚ್ಚು ಬಿಸಿಲಿನ ಝಳ ತಾಗದ...

ಹಿರಿಯ ಜೀವದ ಶ್ರೀಮಂತಿಕೆ

ಪೂರಾ ಎಲುಬಿನ ಹಂದರ, ಸುಕ್ಕುಗಟ್ಟಿ ಹೋದ ಮುಖ, ಸುಮಾರಾಗಿ ಬಾಗಿ ಹೋದ ಬೆನ್ನು ಆದರೂ ಛಲವಿಟ್ಟು ಇಟ್ಟಿಗೆಯನ್ನೆಲ್ಲ ಹೊರುವ ಜವಾಬ್ದಾರಿ, ವಯಸ್ಸು ಸುಮಾರು ೬೫-೭೦ ಆಸುಪಾಸಿನಲ್ಲಿದ್ದಿರಬಹುದು. ಆ ಹಿರಿಯ ದೇಹಕ್ಕೆ ಜೀವನಾಂಶವೇ ಗಾರೆ ಕೆಲಸ. ಪ್ರತಿದಿನವೂ ನಾನು ನನ್ನ ಕೆಲಸಕ್ಕೆ ಹೋಗುವಾಗ ನಮ್ಮ ಮನೆಯ ಹತ್ತಿರದಲ್ಲಿ ಈ ವ್ಯಕ್ತಿಯನ್ನು ಗಮನಿಸುತ್ತಿದ್ದೆ. ಇತರರೆಲ್ಲ ತಮ್ಮ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಗೂಡಿಗೆ ಮರಳುತ್ತಿದ್ದರೆ, ಈತನದು ಮಾತ್ರ ಅಲ್ಲಿ ಮನೆ ಕಟ್ಟುವ ಸ್ಥಳದಲ್ಲೇ ಆಶ್ರಯ. ಒಬ್ಬನೇ ಒಂದು ತಾತ್ಕಾಲಿಕ ಶೆಡ್ ಮಾಡಿಕೊಂಡು, ಅವನ ಮಲಗುವ ಜಾಗ ಅಲ್ಲೇ ಮೂರು ದೊಡ್ಡ ಕಲ್ಲುಗಳನ್ನಿಟ್ಟುಕೊಂಡು, ೨-೩ ಪಾತ್ರೆಗಳನ್ನಿಟ್ಟುಕೊಂಡು ಗಂಜಿಯೇನೋ ಕಾಯಿಸಿ ಕುಡಿಯುತ್ತಿದ್ದ. ತಾನು ತಯಾರು ಮಾಡುವ ಅಡುಗೆಯಲ್ಲೇ ಒಂದಷ್ಟು ನಾಯಿಗೆ, ಹತ್ತಿರಕ್ಕೆ ಬರುವ ಬಿಡಾಡಿ ದನಕ್ಕೆ ಕೊಡುತ್ತಿದ್ದ. ನೋಡಿದಾಗ ಮರುಕವುಂಟಾಗುತ್ತಿತ್ತು. ದಿನನಿತ್ಯದ ನೋಟ, ಗಮನ - ಮುಗುಳ್ನಗೆವರೆಗೆ ತಲುಪಿ, ಮಗಳನ್ನು ಬೆಳಿಗ್ಗೆ ಬಿಸಲಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲೇ ನಿಂತು ಮಾತನಾಡಿಸುತ್ತಿದ್ದೆ. ಆತ ನನ್ನ ಮಗಳನ್ನು ಮಾತನಾಡಿಸಿ ಆಡಿಸಲು ಪ್ರಯತ್ನಿಸುತ್ತಿದ್ದ. ನನ್ನದು ಕನ್ನಡ ಭಾಷೆ. ಆತನದು ತಮಿಳು. ಹಾಗಾಗಿ ಇಬ್ಬರಿಗೂ ಪರಸ್ಪರರ ಭಾಷೆ ಹೆಚ್ಚು ತಿಳಿಯದಿದ್ದರೂ,  ಹೇಗೋ ಹರುಕು ಸಂಭಾಷಣೆ ನಡೆಯುತ್ತಿತ್ತು. ಇದ್ದೊಬ್ಬ ಗಂಡು ಮಗನನ್ನೂ ಅನಾರ...

ಮಕ್ಕಳ ಪರೀಕ್ಷೆ - ಪಾಲಕರ ತಯಾರಿ ಹೇಗೆ?

ಮಕ್ಕಳ ಶಿಕ್ಷಣದ ವಾರ್ಷಿಕ ಅವಧಿಯ ಕೊನೆಯ ಹಂತ, ಪರೀಕ್ಷಾ ಸಮಯ.. ಅತ್ಯಂತ ಮುಖ್ಯವಾದ ಘಟ್ಟ. ಈಗಿನ ಶಿಕ್ಷಣ ವಿಧಾನದ ಪರಿಸ್ಥಿತಿ ನೋಡಿದರೆ, ಮಕ್ಕಳಿಗೆ ಎಷ್ಟರ ಮಟ್ಟಿಗೆ ಪರೀಕ್ಷಾ ಆತಂಕವಿರುತ್ತದೋ ಅದಕ್ಕಿಂತ ದುಪ್ಪಟ್ಟು ಆತಂಕ ಪೋಷಕರಲ್ಲಿ ಇರುತ್ತದೆ. ತಮ್ಮ ಮಗು ಓದಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಪಾಲಕನ ಒತ್ತಾಸೆಯಾಗಿರುತ್ತದೆ. ಎಲ್ಲಾ ಮಕ್ಕಳ ಬುದ್ಧಿ ಮಟ್ಟವು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ, ಹೆಚ್ಚಿನ ಸಿದ್ಧತೆ ಖಂಡಿತ ಅವಶ್ಯಕ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಕೊನೆಯ ವಾರದಲ್ಲಿ ಪುಸ್ತಕ ಹಿಡಿಯುವ ಮಕ್ಕಳಿಗೂ, ಗಾಬರಿಸಿ ಗದರಿಸಿ ಇನ್ನಷ್ಟು ಆತಂಕ ಪಟ್ಟು ಒತ್ತಡ ಹಾಕುವ ಪೋಷಕರಿಗೂ, ಇದೋ ಒಂದು ಚಿಕ್ಕ ಟಿಪ್ಪಣಿ, ಪರೀಕ್ಷೆ ಎಂಬುದಕ್ಕೆ ಮಕ್ಕಳ ಜೊತೆ ನಮ್ಮ ತಯಾರಿ, ಜವಾಬ್ದಾರಿಗಳೇನು ಎಂಬುದರ ಬಗ್ಗೆ. ೧. ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಯಲ್ಲಿ ವಿಚಾರಣೆ.  ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡುವ ಭರವಸೆಯನ್ನೀಡುವ ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ಧಾರಿ ಮುಗಿದೀತೇ? ಖಂಡಿತವಾಗಿಯೂ ಅಷ್ಟೇ ಸಾಲದು. ಮಕ್ಕಳ ಕಲಿಕೆಯ ಹಂತದಲ್ಲಿ ಅವರಷ್ಟೇ ನಾವು ಕೂಡ ಭಾಗಿಯಾಗಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಂತೆಯೇ ಒಮ್ಮೆ ಶಾಲೆಯಲ್ಲಿ ಮಗುವಿನ ಪ್ರಗತಿಯ ಬಗ್ಗೆ ವಿಚಾರಿಸಿ, ನಮ್ಮ ಮಗುವಿಗೆ ಯಾವ ವಿಷಯ ಕಷ್ಟವಾಗುತ್ತಿದೆ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ,...