ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಗೊಳ್ಳಿ ತಿನ್ನುವಷ್ಟೇ ಊಟ!

ಇಮೇಜ್
ಸಂಬಂಧಿಕರ ಒಂದು ಗೃಹಪ್ರವೇಶ ಸಮಾರಂಭಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ನನ್ನೆದುರಿನಲ್ಲಿ, ಒಬ್ಬ ತಾಯಿ, ಪಕ್ಕದಲ್ಲಿ ಅವಳ ಸುಮಾರು 6 ವರ್ಷದ ಒಂದು ಮಗು, ಪಕ್ಕದಲ್ಲಿ ಮಗುವಿನ ಆರೈಕೆಗೆ ಮೀಸಲಾಗಿರುವ ಒಬ್ಬಳು ಹೆಣ್ಣು ಮಗಳು ಮತ್ತು ಕಾರಿನ ಡ್ರೈವರ್ ಇಷ್ಟು ಜನ ಊಟಕ್ಕೆ ಕುಳಿತಿದ್ದರು. ಮೇಲ್ನೋಟಕ್ಕೆ ಮಗು ತುಸು ಅನಾರೋಗ್ಯದಿಂದ ಮಂದವಾಗಿರುವುದು ತೋರುತ್ತಿತ್ತು. ಈಗಿನ ಕಾಲದಲ್ಲಿ, ಸಮಾರಂಭಗಳಲ್ಲಿ ಯಾವುದಕ್ಕೆ ಕೊರತೆಯಾದರೂ ಕೂಡ ಭೋಜನ ಮಾತ್ರ ಅದ್ದೂರಿಯಾಗಿರಬೇಕು. ಜನರಿಗೆ ತಿನ್ನಲು ಸಾಧ್ಯವೋ ಇಲ್ಲವೋ ೨೦-೩೦ ಬಗೆ ಐಟಮ್ಸ್ಗಳೆಂತೂ ಊಟದ ಬಾಳೆ ಎಲೆ ಮೇಲಿರಬೇಕು. ನಗರ ಪ್ರದೇಶಗಳಲ್ಲಂತೂ, ಎಲ್ಲವೂ ಈಗ ಕಾಂಟ್ರಾಕ್ಟ್ ಲೆಕ್ಕ. ವಿವಿಧ ಭಕ್ಷ್ಯಗಳನ್ನು ಒಳಗೊಂಡ ಪ್ರತೀ ಬಾಳೆಗೆ ನಿಗದಿತ ಬೆಲೆ. ಊಟ ಪ್ರಾರಂಭವಾಯಿತು.  ಬಾಳೆಯ ತುಂಬಾ ಸಾಲಾಗಿ ಒಂದಾದ ಮೇಲೊಂದು ಭಕ್ಷ್ಯಗಳನ್ನು ಬಡಿಸುತ್ತಾ ಹೋದರು. ಸಾಮಾನ್ಯವಾಗಿ ಮಕ್ಕಳ ಊಟದ ಶೈಲಿ ಪಾಲಕರಿಗೆ ತಿಳಿದಿರುತ್ತದೆ. ಊಟದ ಶಿಸ್ತು ಬರುವರೆಗೂ ತಮಗಿಷ್ಟವಾದ ಒಂದಷ್ಟು ಸಿಹಿ ಮತ್ತು ಕರಿದ ಪದಾರ್ಥಗಳನ್ನಷ್ಟೇ ತಿಂದು ಎದ್ದೇಳುವುದು ಮಕ್ಕಳ ರೂಢಿ. ಬಡಿಸುತ್ತಿರುವ ಯಾವ ಭಕ್ಷ್ಯಗಳನ್ನೂ ಬೇಡವೆನ್ನದೆ ಎಲ್ಲವನ್ನು ಅವರೆಲ್ಲರೂ ಹಾಕಿಸಿಕೊಂಡರು. ಮಗುವಿನ ಆರೋಗ್ಯ ಯಾಕೋ ಅನುಮಾನವಾಸ್ಪದವಾಗಿದ್ದರಿಂದ, ತಾಯಿ ಮಗುವಿನ ಸಹಾಯಕಿಗೆ ಊಟ ಮಾಡದೆ ಕಾಯುವಂತೆ ಸೂಚನೆ ನೀಡಿದಳು. ಅನ್ನ ಸಾರು ಪೂರಿ ಸಾಗು ಎಲ್ಲವೂ ಆ ಸಹಾಯಕಿಯ ...

ಹೊಗಳಿಕೆ - ತಾಕಿಸು ನಿಜದ ಸೂಜಿಮೊನೆ

"ನೋಡು ನೀನೀಗ ಊಟ ಮಾಡ್ಲಿಲ್ಲ ಅಂದ್ರೆ ಯಾರೂ ನಿಂಗೆ ಗುಡ್ಗರ್ಲ್ ಹೇಳಲ್ಲ, ಬ್ಯಾಡ್ಗರ್ಲ್ ಅಂತಾರೆ, ಬೇಕಾ ನಿಂಗೆ ಬ್ಯಾಡ್ಗರ್ಲ್ ಅಂತ ಹೇಳಿಸ್ಕೊಳೋದು?" "ನಮ್ಮ ಹುಡ್ಗನಿಗೆ ಸ್ವಲ್ಪ ಪಾಲಿಶ್ ಹೊಡೆದು ಗುಡ್ ಬಾಯ್ ಅಂದ್ರೆ ಸಾಕು, ಹೇಳಿದ್ದೆಲ್ಲ ಕೆಲಸ ಮಾಡತ್ತೆ ಪಾಪ" "ಅವಳಿಗೆ ಸುಮ್ಸುಮ್ನೆ ಗುಡ್ ಗರ್ಲ್ ಅಂತ ಹೊಗಳಿ ಅಟ್ಟಕ್ಕೇರಿಸಿ ಇಟ್ಟಿದ್ದೀಯ ನೀನು, ತಾನು ಮಾಡಿದ್ದೆಲ್ಲ ಸರಿ ಅಂತ ವಾದ ಮಾಡ್ತಾಳೆ ನೋಡು ಈಗ.. " "ಅಮ್ಮ ಆದ್ರೆ ಗುಡ್ ಅಂತಾಳೆ, ನೀನು ನೋಡಿದ್ರೆ ಯಾವಾಗ್ಲೂ ಸಿಡುಕ್ತಾನೆ ಇರ್ತೀಯಲ ಅಪ್ಪ.. "  "ಅವನು ಮಾಡಿರೋ ಡ್ರಾಯಿಂಗ್ ನೋಡಿ ಅಜ್ಜಿ ಚೆನ್ನಾಗಿದೆ ಅಂತ ಅಷ್ಟೇ ಹೇಳಿದ್ರಂತೆ, ವಾವ್ ಸೂಪ್ಪರ್ , ಗುಡ್ ಅಂತ ಏನೂ ಹೇಳಲೇ ಇಲ್ಲ ಅಂತ ಮುನಿಸ್ಕೊಂಡಿದಾನೆ ಮಗ"  "ಗುಡ್ ಗರ್ಲ್ ಅಲ್ವ ನೀನು? ಬಾ ಚಾಕೊಲೇಟ್ ಕೊಡ್ತೀನಿ ತೊಡೆ ಮೇಲೆ ಕೂತ್ಗ್ಗೋ ಬಾ.. "  ಈ ರೀತಿಯ ಸಂಭಾಷಣೆ ನಮ್ಮ ನಿಮ್ಮ ಮನೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಗುತ್ತಲೇ ಇರುತ್ತವೆ ಅಲ್ವ?  ಮಕ್ಕಳಿಗೆ ಹೊಗಳಿಕೆ ನೀಡುವುದು ಸರಿಯೇ ತಪ್ಪೇ ಎಂಬ ಜಿಜ್ಞಾಸೆ ನಮಗೆ ಕಾಡುವುದು ಸಹಜ. ಮಕ್ಕಳಿಗೆ ಪ್ರೋತ್ಸಾಹ ಅತ್ಯಗತ್ಯ. ಪ್ರೋತ್ಸಾಹವಿಲ್ಲದೆ  ಮಕ್ಕಳು ಸಾಯುವುದಿಲ್ಲ ಆದರೆ ಒಣಗುತ್ತಾರೆ. ಪ್ರಶಂಸೆ ಎಂದರೆ ಇನ್ನೊಬ್ಬರು ಮಾಡಿದ ಕಾರ್ಯಕ್ಕೆ ಅಂಗೀಕಾರ ಅಥವಾ ಅನುಮೋದನೆ. ಏನನ್ನಾದರೂ ಕಲಿಸುವಾಗ, ಮಕ್ಕಳು ...

ಹೆರಿಟೇಜ್ ವಿಲೇಜ್ - ರಘುರಾಜ್ಪುರ

ಇಮೇಜ್
ಒಡಿಶಾ ಪ್ರವಾಸ ಮಾಡಿದ್ದ ಗೆಳೆಯನೊಬ್ಬ, ನೀ ಅಲ್ಲಿ ಆರ್ಟ್ ವಿಲ್ಲೇಜ್ ಗೆ ಹೋಗಕ್ಕೇ.. ನಿಂಗ್ ಭಾರೀ ಇಷ್ಟ ಆಗ್ತು ಎಂದು ಹೇಳಿದ್ದು ವರ್ಷಗಳಿಂದ ಮನಸ್ಸಿನಲ್ಲಿ ಬರೆದಿಟ್ಟ ಷರಾ ಆಗಿತ್ತು. ಕಲೆಯ ಕುರಿತು ಆಸಕ್ತಿ ಇರುವ ನನಗಂತೂ, ಇಡೀ ಊರಿಗೆ ಊರೇ ಪೇಂಟಿಂಗ್ ಮತ್ತು ಆರ್ಟ್ ಗಳಿಂದ ತುಂಬಿರುತ್ತದೆ, ಎಂಬ ವಿಷಯವೇ  ಪುಳಕವಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಇಂಟರ್ನೆಟ್ ಮಾಹಿತಿ ಒಟ್ಟು ಮಾಡಿಕೊಂಡು ತಯಾರಾಗಿ ಹೋದೆವು. ಪುರಿ ನಗರಿಯ ಹೊರಗೆ, ಭುವನೇಶ್ವರ್ ಕಡೆಗೆ ಹೈವೆಯಲ್ಲಿ ೧೪ ಕಿಮೀ ಮುಂದಕ್ಕೆ ಹೋದರೆ, ಚಂದನಾಪುರ್ ಸಿಗುತ್ತದೆ, ಅಲ್ಲಿಯ ಮಾರುಕಟ್ಟೆಯ ಪಕ್ಕದಲ್ಲಿ ಒಳ ರಸ್ತೆ ಹಿಡಿದು ೨೦೦ ಮೀ ಮುಂದಕ್ಕೆ ಹೋದರೆ ಸಿಗುವುದೇ ರಘರಾಜಪುರ್ ಹಳ್ಳಿ. ೧೦೦-೧೨೦ ಸಣ್ಣ ದೊಡ್ಡ ಮನೆಗಳಿರುವ ಈ ಊರಿನ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬರಾದರೂ ಕಲಾವಿದರು! ಇಡೀ ಊರಿನ ಎಲ್ಲ ಮನೆಗಳ ಗೋಡೆಗಳ ಮೇಲೂ ಸಾಂಪ್ರದಾಯಿಕ ಚಿತ್ರಕಲೆಗಳು! ಕೆಲವರ ಮನೆ ಎಷ್ಟು ಸಣ್ಣದೆಂದರೆ, ಮನೆ ಹೊರಗಿನ ಜಗಲಿಯಲ್ಲೇ ಕಾಲವಸ್ತುಗಳ ನೇತು ಹಾಕಿ ಪ್ರದರ್ಶನಕ್ಕಿಟ್ಟಿರುತ್ತಾರೆ.  ಭಾರತೀಯ ರಾಷ್ಟ್ರೀಯ ರಾಷ್ಟ್ರೀಯ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಚ್) ರಘುರಾಜ್ಪುರವನ್ನು ಒಂದು ಪರಂಪರೆ ಗ್ರಾಮವಾಗಿ ಅಭಿವೃದ್ಧಿಪಡಿಸಿದೆ, ' ಹೆರಿಟೇಜ್ ವಿಲೇಜ್' ಎಂದು ಘೋಷಿಸಿದೆ. ಇದನ್ನು ಒಡಿಶಾದ ಪ್ರಾಚೀನ ಗೋಡೆ ವರ್ಣಚ...

ಸೋಲಲಿ ಮಕ್ಕಳ ಸೋಲಿನ ಭಯ

ಇಮೇಜ್
ಮಗು ಬಿಸಿನೀರ ಕಾಯಿಸಿ, ಇಕ್ಕಳದಿಂದ ಲೋಟಕ್ಕೆ ನೀರನ್ನು ಎರಸುವಾಗ, ನೀರು ಕೆಳಗೆ ಚೆಲ್ಲಿತೋ.. "ನೀರು ಚೆಲ್ಲಿದ್ಯಾ? ಎದ್ದೇಳು ಮಾರಾಯ್ತಿ, ನಾನು ಮಾಡಿ ಕೊಡ್ತೀನಿ, ನಿಂಗೆ ಒಂದು ಕೆಲಸವೂ ನೆಟ್ಟಗೆ ಮಾಡಲು ಬರುವುದಿಲ್ಲ. ಸುಮ್ನೆ ನನಗಿಲ್ಲಿ ಒಂದಷ್ಟು ತೊಂದರೆ ಕೊಡಕ್ಕೆ.. " ಆಟದಲ್ಲಿ ನಾಲ್ಕು ರೌಂಡ್ ಭಾಗವಹಿಸಿ, ಐದನೇ ರೌಂಡ್ ಗೆ ಸೋಲಾಗಿ ಬಂದ ಮಗುವಿಗೆ, "ಇನ್ನೊಂಚೂರು ಗಮನ ಇಟ್ಟು  ಆಡಿದ್ರೆ ಏನಾಗ್ತಿತ್ತು ನಿಂಗೆ? ಅಲ್ಲಿ ಇಲ್ಲಿ ನೋಡ್ತಾ ಕೂರ್ತೀಯ ಲೇಜಿ ತರ, ಏನ್ ಪ್ರಯೋಜನ ಈಗ ಅತ್ರೆ, ಸೀರಿಯಸ್ ಇಲ್ಲ ನೀನು ಸ್ಪೋರ್ಟ್ಸ್ ಕಡೆ, ಈ ಚಂದಕ್ಕೆ ಕೋಚಿಂಗ್ ಯಾಕೆ ನಿಂಗೆ? ಎಲ್ಲ ದುಡ್ಡು ವೇಸ್ಟ್" "ಅಯ್ಯೋ ಅಲ್ಲಿ ಹತ್ತಬೇಡ, ಬಿದ್ದೋಗ್ತೀಯ, ಬಿದ್ದರೆ ನಾನು ಬರಲ್ಲ ಆಮೇಲೆ ಎತ್ತಕ್ಕೆ" "ಚೆನ್ನಾಗಿ ಓದಿದ್ದೆಅಂತೀಯಾ,  ಎಕ್ಷಾಮ್ ಟೆನ್ಶನ್ ಮಾಡ್ಕೊಂಡ್ರೆ ಇನ್ನೇನಾಗತ್ತೆ, ಈಗ ಇಲ್ಲಿ ಆನ್ಸರ್ ಬರ್ತ್ತಿತ್ತು ಅಂದ್ರೆ ಏನು ಪ್ರಯೋಜನ, ಯು ಜಸ್ಟ್ ಲಾಸ್ಟ್ ಯುವರ್ ಗೋಲ್ಡನ್ಚಾನ್ಸ್"  "ಅಯ್ಯೋ ಏನು ಕೆಟ್ಟವರು ಆ ಕೋಚ್, ಕೈ ಕಾಲಿಗೆ ನೋವಾಗಿದೆ ಅಂತಿದಾಳೆ ಮಗಳು, ಆದ್ರೂನೂ ಆಡು ಅಂತಾರಲ್ಲ, ಸ್ವಲ್ಪನೂ ಕರುಣೇನೇ ಇಲ್ಲ. ಇದೇ ತರ ನೋವಾಗಿ ನೋವಾಗಿ ಕೈ ಕಾಲು ಮುರ್ಕೊಂಡ್ರೆ?"  "ಲಕ್ಷಗಟ್ಟಲೆ ದುಡ್ಡು ಕೊಟ್ಟು ಇಷ್ಟು ಫೇಮಸ್ಸ್ಕೂಲ್ ಗೆ ಹಾಕಿದೀವಿ,  ಗೇರ್ ಸೈಕಲ್, VR ಗೇಮ್ಸು, ಎಲ್ಲಾ ಕೊಟ್ಟಾ...

ಒಂದು ದ್ವೀಪದ ಕಥೆ!!

ಇಮೇಜ್
ಮಕ್ಕಳ ಪಾರ್ಕಿನಲ್ಲಿ ಮಗಳ ಆಟದ ದಿನಚರಿ. ಅಲ್ಲೊಂದು ಪುಟ್ಟ ಮಗು ಕಲ್ಲು ಮಣ್ಣುಗಳನ್ನು ಹೆಕ್ಕಿ ತಂದು ಜೋಡಿಸಿ ತನ್ನದೇ ಆದ ಆಟವನ್ನು ಆಡುತ್ತಿತ್ತು. ಅಣತಿ ದೂರದಲ್ಲಿ ಅವರಪ್ಪ ಫೋನಿನಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಮಗುವಿನ ಜೋಡಣಾ ಶೈಲಿ ನನಗಿಷ್ಟವಾಗಿ ಹೋಗಿ ಮಾತನಾಡಿಸಿ ಗೆಳೆತನ ಮಾಡಿಕೊಂಡೆ. ನಾಲ್ಕು ವರ್ಷದ ಹುಡುಗ ಅವನು. ಮಾಶಾ ಅಂಡ್ ದಿ ಬೇರ್ ಕಾರ್ಟೂನ್ ನಲ್ಲಿ ಬರುವ ಸಂದರ್ಭವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ಕ್ಯಾಂಪ್ಫೈರ್ ಗೆ ತಯಾರಿ ನಡೆಸುತ್ತಿದ್ದ. ಸರಿ, ಅವನ ಕಲ್ಪನೆಯ ಕಥೆಗೆ ತಕ್ಕಂತೆ , ಇಬ್ಬರು ಸೇರಿ ವಸ್ತುಗಳ  ಒಟ್ಟು ಮಾಡುವುದು ಇನ್ನಿತರ ಚಟುವಟಿಕೆ ನಡೆಸುತ್ತಾ ಹೋದೆವು. ನನ್ನ ಮಗಳಿಗೋ ವ್ಯಾಯಮದ ಪಾರ್ಕಿನಲ್ಲಿ ಕಸರತ್ತು ಮಾಡುವ ಹುಚ್ಚು. ಆದರೆ ಈ ಕಡೆಗೂ ಒಲವು. ಆಗಾಗ ಬಂದು ನಮ್ಮನ್ನು ಮಾತನಾಡಿಸುತ್ತಾ, ಕಥೆಯನ್ನು ಕೇಳುತ್ತಾ, ಮಧ್ಯೆಮಧ್ಯೆ ಸಹಾಯ ಮಾಡಿ ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ, ಯಾವುದೋ ಒಂದು ದ್ವೀಪದಲ್ಲಿದ್ದ ನಾವು ಕ್ಯಾಂಪ್ ಫೈರ್ ತಯಾರಿ ನಡೆಸುತ್ತಿದ್ದವರು, ಹಾಸ್ಪಿಟಲ್ ಗೆ ಹೋಗುವ ಕಥೆಯ ಮೂಲಕ, ನಮ್ಮೆಲ್ಲ ಜೋಡಣೆಯನ್ನು ಆ ಹುಡುಗ ಬದಲಾಯಿಸುತ್ತಾ ಬಂದ. ಯಾವುದಕ್ಕೂ ಒಪ್ಪದಾದ. ನನಗೋ ಆ ಕಾರ್ಟೂನ್ ನ ಹಿಂದೆ ಮುಂದೆ ತಿಳಿಯದು. ನಾನು ಜೋಡಿಸಿಟ್ಟಿದ್ದನ್ನೆಲ್ಲ ಆತ ಮುರಿಯುತ್ತಿದ್ದ. ನಾನು ಕಷ್ಟಪಡುತ್ತಿದ್ದುದ್ದನ್ನು ಕಂಡು ಮಗಳು ಓಡಿಬಂದಳು. ಆಸ್ಪತ್ರೆಯ ಕಥೆ ಮಾಷಾ ಅಂಡ್ ದ ಬೇರ...

ಸೂರ್ಯನಿಗೊಂದು ದೇವಾಲಯ!!

ಇಮೇಜ್
ನಮಗೆಲ್ಲ ಬೆಳೆಗೆದ್ದ ಕೂಡಲೇ ಮನೆಯ ಬಾಗಿಲ ಮುಂದೆ ಹೋಗಿ ಸೂರ್ಯನ ಕಂಡು ನಮಸ್ಕರಿಸಿ ಬರಲು ಚಿಕ್ಕಂದಿನಲ್ಲಿ ಹೇಳಿಕೊಡುತ್ತಿದ್ದರು. ಅದೆಷ್ಟೋ ಸುಂದರ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಂಡು ಕೊಂಡಾಡಿಯಾಗಿದೆ ಇನ್ನು ಸೂರ್ಯ ನಮಸ್ಕಾರ ಆಸನಗಳ ಅಭ್ಯಾಸ ಇವೆಲ್ಲವೂ ಸಾಮಾನ್ಯ ಬಳಕೆಯಲ್ಲಿದ್ದರೂ, ಸೂರ್ಯನಿಗಾಗಿಯೇ ಬ್ರಹತ್ ದೇವಾಲಯವನ್ನು ಕಾಣುವಾಗ ಮಾತ್ರ ರೋಮಾಂಚವಾದ್ದು ಸುಳ್ಳಲ್ಲ. ಹೀಗೊಂದು ಸೂರ್ಯನ ದೇವಾಲಯಕ್ಕೆ ಭೇಟಿಯ ಅವಕಾಶ ಸಿಕ್ಕಿದ್ದು ನಮಗೆ ನಮ್ಮ ಒಡಿಶಾ ಪ್ರವಾಸದಲ್ಲಿ.. ಕೊನಾರ್ಕ್ ಸೂರ್ಯ ದೇವಾಲಯವಿರುವುದು, ಭಾರತದ ಪೂರ್ವ ಕರಾವಳಿ ಒಡಿಸ್ಸಾದ ಪುರಿಯಲ್ಲಿ.  ಇದು ಯುನೆಸ್ಕೋ ದ ವಿಶ್ವ ಪರಂಪರೆಯಲ್ಲಿ ಪಟ್ಟಿ ಮಾಡಿರುವ ಸುಂದರ ಸಂರಕ್ಷಿತ ತಾಣಗಳಲ್ಲಿ ಒಂದಾಗಿದ್ದು,ಇದು  ತನ್ನ ಸೊಗಸಾದ ಕಳಿಂಗ ವಾಸ್ತು ಶಿಲ್ಪ ಮತ್ತು ಕೆತ್ತನೆಗಳಿಗೆ ಪ್ರಖ್ಯಾತವಾಗಿದೆ. ಸೂರ್ಯನು ಶಕ್ತಿಯ ಸ್ವರೂಪ. ಭಾರತದಲ್ಲಿರುವ ಸೂರ್ಯದೇವನಿಗೆ ಸಮರ್ಪಿತ ಮೂರು ದೇವಾಲಯಗಳ ಪೈಕಿ ಇದು ಒಂದು. ಗುಜರಾತ್ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ಥಾಂಡ ದೇವಾಲಯವು ಕೂಡ ಇದರಷ್ಟೇ ಜನಪ್ರಿಯವಾಗಿದೆ. 12ನೇ ಶತಮಾನದಲ್ಲಿ ನರಸಿಂಹ ದೇವನಿಂದ ಕಟ್ಟಿಸ ಕಟ್ಟಿಸಲ್ಪಟ್ಟ ಈ ದೇವಾಲಯ, ಸಮುದ್ರದ ತುದಿಯಲ್ಲಿದ್ದು ಶಿಥಿಲಗೊಂಡಿದ್ದರೂ ಕೂಡ 2,000 ಕ್ಕೂ ಹೆಚ್ಚು ವರ್ಷಗಳಿಂದ ಸ್ಥಿರವಾಗಿ ನಿಂತಿದೆ. ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ವಾಸ್ತವವಾಗಿ ಹೇಳಬೇಕೆಂ...

'ಮದುವೆಯ ಮನೆ' - ಓಡಿಶಾದ ಮನೆ ಮನೆಗಳಲ್ಲೂ ಚಿತ್ರಕಲೆ

ಇಮೇಜ್
ಓಡಿಸಾ ಪ್ರವಾಸದ ಸಂದರ್ಭದಲ್ಲಿ ನಾವು ಜನರ ಇನ್ನೊಂದು ವಿಶಿಷ್ಟ ಸಂಪ್ರದಾಯ ವನ್ನು ಗಮನಿಸಿದವು. ನಮ್ಮ ಮಲೆನಾಡ ಕಡೆ ಹಸಿ ಚಿತ್ತಾರವಿದ್ದಂತೆ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬಿಹಾರದ ಮಧುಬನಿ ಇದ್ದಂತೆ, ಶುಭ ಸಾಂಕೇತಿಕ ವಸ್ತುಗಳ ಚಿತ್ರಕಲೆಯ ಪರಂಪರೆ ಮದುವೆ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಯಾರ ಮನೆಯಲ್ಲಿ ಮದುವೆಯ ಆಚರಣೆ ಇರುತ್ತದೆಯೋ, ಅವರ ಮನೆಯ ಹೊರಗಿನ ಗೋಡೆಯ ಮೇಲೆ, ಕಳಶದ ಮೇಲಿರುವ ತೆಂಗಿನ ಕಾಯಿ, ಬಾಳೆ ಮರ, ಮೀನು, ವಾದ್ಯಗಳು ಇತ್ಯಾದಿ ನಿಸರ್ಗ ಆರಾಧನೆಯ ಫಲವಂತಿಕೆಯ ಸಾಂಕೇತಿಕ ವಸ್ತುಗಳ ಪೈಂಟಿಂಗ್ ಮಾಡಿಸುತ್ತಾರೆ. ಸಮೃದ್ಧಿ ಮತ್ತು ಶುಭವನ್ನು ಸೂಚಿಸುವ, ಈ ರೀತಿಯ ಪೇಂಟಿಂಗಳನ್ನು, ನೋಡಲು ನಿಜವಾಗಿಯೂ ಖುಷಿಯಾಗುತ್ತಿತ್ತು. ವಧು ವರರ ಹೆಸರುಗಳನ್ನು ಸೂಚಿಸಿ ಮದುವೆಯ ಮಾಹಿತಿಯನ್ನು ನೀಡಲು ಕೂಡ ಈ ರೀತಿಯ ಸಂಪ್ರದಾಯ ಬೆಳೆದು ಬಂದಿರಬಹುದು. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಬದಲಾದರೂ, ಮನುಷ್ಯನ ಖುಷಿ ಮತ್ತು ಸಂಭ್ರಮಾಚರಣೆಗೆ, ಚಿತ್ರಕಲೆ, ಹಾಡು-ನೃತ್ಯ ಇನ್ನಿತರ ಕಲೆಗಳ ಮುಖೇನ ನಡೆಸಿಕೊಂಡು ಹೋಗುವ ಇಂತಹ ಪುಟ್ಟ ಪುಟ್ಟ ಸಂಪ್ರದಾಯಗಳು, ಆ ಪ್ರದೇಶದ ಸಂಸ್ಕೃತಿಯ ಉಳಿವಿಗೆ ಸಹಾಯಕ ಅಂಶಗಳಾಗಿರುತ್ತವೆ.  #marriagepainting #artandculture #odisha

Odisha - Land of Art

ಇಮೇಜ್
ನಮ್ಮ ಓಡಿಶಾ ಪ್ರವಾಸದಲ್ಲಿ, ನಾವು ಮೊದಲು ಮೆಟ್ಟಿದ ನಗರ ರಾಜಧಾನಿ ಭುವನೇಶ್ವರ. ಸುಮಾರು  400+ sq. Km ಇರುವ ಈ ನಗರದಲ್ಲಿ, ಏರ್ಪೋರ್ಟ್ನಿಂದ ಹೊರಟು ಹೋಟೆಲ್ ತಲುಪುವವರೆಗೂ ಕಣ್ಣಾಡಿಸಿದ ಜಾಗದಲ್ಲೆಲ್ಲಾ ನಮ್ಮನ್ನು ಆಕರ್ಷಿಸಿದ ಎರಡು ಮುಖ್ಯ ವಸ್ತು ವಿಷಯಗಳು ಒಂದು ನಗರದ ಅದ್ಭುತ ಸ್ವಚ್ಛತೆ ಮತ್ತೊಂದು, ರಸ್ತೆಯ ಬದಿಯ ಗೋಡೆಗಳಿಂದ ಹಿಡಿದು, ರಸ್ತೆಯ ಬದಿಯ ಮನೆಗಳ ಗೋಡೆಗಳು ಸೇರಿದಂತೆ ಎಲ್ಲವೂ ಕೂಡ ಚಿತ್ರಕಲೆಗಳಿಂದ ಸಿಂಗರಿಸಿ ಹೋಗಿತ್ತು, ಇಡೀ ಊರಿಗೆ ಊರಿನ ಗೋಡೆಗಳೆಲ್ಲವೂ ಪೇಂಟಿಂಗ್ ಕ್ಯಾನ್ವಾಸ್ಗಳೇ!! ಕಣ್ಣು ಹಾಯಿಸಿದಲ್ಲೆಲ್ಲ ರಸ್ತೆಯ ಬದಿ ಕಾಂಪೌಂಡಿನ ಮೇಲೆಲ್ಲಾ, ಒಡಿಸ್ಸಾದ ಇತಿಹಾಸ, ನೃತ್ಯ, ಜಾನಪದ ಕಲೆ, ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕುರಿತಾದ, ಒಂದಕ್ಕಿಂತ ಒಂದು ಚೆಂದದ ಪೇಂಟಿಂಗ್ಗಳು!! ಪೌರಾಣಿಕ ನಿರೂಪಣೆ ಮತ್ತು ಜಾನಪದ ಕಥೆಗಳನ್ನು ಚಿತ್ರಗಳ ಮೂಲಕ ಪ್ರತಿಬಿಂಬಿಸುವ ಪಟ್ಟ ಚಿತ್ರಗಳ ಡಿಸೈನ್ಗಳು ನೋಡಿದಲ್ಲೆಲ್ಲ ಮನಸ್ಸಿಗೆ ಮುದವನ್ನು ನೀಡುವಂತಿದೆ. ಶಾಲಾ ಕಾಲೇಜುಗಳು, ಪೋಸ್ಟ್ ಆಫೀಸ್, ಪೊಲೀಸ್ ಠಾಣೆ, ಆಸ್ಪತ್ರೆ, ಫ್ಲೈ ಓವರ್, ಟ್ರಾಫಿಕ್ ಜಂಕ್ಷನ್ಗಳು ಇತ್ಯಾದಿ ಕಟ್ಟಡಗಳ ಜೊತೆಗೆ ಇನ್ನಿತರ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಮೇಲೆ ಅವುಗಳ ಕಾರ್ಯನಿರ್ವಹಣೆಯ ಕುರಿತಾದ ವಿಷಯಗಳ ಪೇಂಟಿಂಗ್ಗಳು ಎಲ್ಲೆಡೆ ಕಾಣಸಿಗುತ್ತಿದ್ದವು. ಇಲ್ಲಿನ ದೇವಾಲಯಗಳು ಮತ್ತು ದೈವಿಕತೆಗೆ ಸಂಬಂಧಪಟ್ಟಂತಹ ಚಿತ್ರಗಳು, ಜಾನಪದ ...

ಚೌಸಟ್ ಯೋಗಿನಿ ದೇವಾಲಯ

ಇಮೇಜ್
ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ...

ನಮ್ಮ ಆಹಾರವೇ ನಮಗೆ ಔಷಧಿ

ಇಮೇಜ್
ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ.  ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ.  ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ...