ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾಕುಂಭಮೇಳ - ಆರಕ್ಷಕರ ವಿನಮ್ರತೆ

ವಿಮಾನದಿಂದಿಳಿದು ವಾರಾಣಸಿ ತಲುಪಿದ್ದೆವು ಆ ದಿನ ರಾತ್ರಿ. ಮರುದಿನಕ್ಕೆ ಪ್ರಯಾಗರಾಜ್ಗೆ ಹೊರಡುವ ಮುನ್ನ, ಕಾಶೀ ವಿಶ್ವನಾಥನನ್ನೊಮ್ಮೆ ಸ್ಪರ್ಶದರ್ಶನ ಮಾಡಿ ಹೊರಡುವುದು ಎಂದು ಪ್ಲಾನ್ ಆಗಿತ್ತು. ೪ ಗಂಟೆಯ ದರ್ಶನಕ್ಕೆ ಬೆಳಗಿನ ಜಾವ ೨.೩೦ ಎದ್ದು ಹೋಗಿಯಾಗಿತ್ತು. ಗಲ್ಲಿಗಲ್ಲಿಗಳ ದಾಟಿ, ಮಾತಾ ಅನ್ನಪೂರ್ಣ ಭವನದ ಪಕ್ಕದಲ್ಲಿ ಸರತಿಯಲ್ಲಿ ನಿಂತೆವು. ಕೊರೆವ ೭ ಡಿಗ್ರಿ ಚಳಿ ಇನ್ನೂ ಒಂದು ಗಂಟೆ ಕಾಯಬೇಕು ಗೇಟು ತೆರೆಯಲು. ನಮ್ಮ ಗುಂಪಿನಲ್ಲಿದ್ದ ಹಿರಿಯರೊಬ್ಬರಿಗೆ ಬಾಯಾರಿಕೆ ಆಗತೊಡಗಿತು. ಆದರೆ ಗಡಿಬಿಡಿಯಲ್ಲಿ ನೀರು ತಂದಿಲ್ಲ. ಸುತ್ತಮುತ್ತ ಎಲ್ಲಿ ನೋಡಿದರೂ ಬಾಗಿಲು ಮುಚ್ಚಿ ನಿದ್ರಿಸುತ್ತಿರುವ ಗಲ್ಲಿಗಳಷ್ಟೇ. ೩.೪೦ ಸುಮಾರಿಗೆ ಆ ರಸ್ತೆಯ ಒಬ್ಬ ಪೂಜಾಸಾಮಗ್ರಿ ಅಂಗಡಿಯವ ಬಾಗಿಲು ತೆರೆಯಲಾರಂಭಿಸಿದ. ತಕ್ಷಣವೇ ಹೋಗಿ ನೀರಿನ ಬಾಟಲಿ ಕೇಳಿದೆ. ಇಲ್ಲ ಎಂಬ ಉತ್ತರ ನಿರಾಸೆ ತಂದಿತು. ಅಕ್ಕನಿಗೆ ಬಿಕ್ಕಳಿಕೆ ಕೂಡ ಪ್ರಾರಂಭವಾಯಿತು ಈಗ ನೀರಿನ ಅವಶ್ಯಕತೆ ತುಂಬಾ ಇತ್ತು. ಭಕ್ತರ ಕ್ಯೂ ಸಂಭಾಳಿಸಲು ಅಲ್ಲಿ ಪೊಲೀಸ್ ಗಸ್ತು ಇರುತ್ತದೆ. ಇದು ವೈಯುಕ್ತಿಕ ವಿಷಯ, ಆರಕ್ಷಕರ ಸಹಾಯ ಸಿಗುವ ಸಾಧ್ಯತೆ ಕಮ್ಮಿ ಎಂದೆನಿಸಿದರೂ ಒಂದು ಪ್ರಯತ್ನ ಮಾಡಿದೆ. ಹತ್ತಿರದಲ್ಲಿ ಗಸ್ತಿನಲ್ಲಿದ್ದ ಒಬ್ಬರಿಗೆ, ನಮಗೆ ನೀರಿನ ಅವಶ್ಯಕತೆ ಇರುವುದಾಗಿ ತಿಳಿಸಿದೆ. ಒಮ್ಮೆ ನನ್ನನ್ನೂ, ಮುಂದಕ್ಕೆ ಸರತಿಯಲ್ಲಿ ನಿಂತಿರುವ ನನ್ನ ಹಿರಿಯ ಸ್ನೇಹಿತರನ್ನೂ ದುರುಗುಟ್ಟಿ ನೋಡಿದ. "ನಿಮ...